

ಬಳ್ಳಾರಿ, 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ತೃತೀಯಲಿಂಗಿ ಮತ್ತು ಯುವಕನು ನೇಣು ಬಿಗಿದು ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೇದಾರ ಕೇತಯ್ಯ ನಗರ (ಇಂದಿರಾನಗರ)ದಲ್ಲಿ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ.
ಮೃತರು ತೃತೀಯಲಿಂಗಿ, ಬಳ್ಳಾರಿ ನಗರದ ಚಾಗನೂರು ಗ್ರಾಮ ನಿವಾಸಿಯಾಗಿದ್ದ ಸುಹಾಸಿನಿ ಮತ್ತು ಹೊಸ ಮಲಪನಗುಡಿ ನಿವಾಸಿ, ಆಟೋ ಚಾಲಕ ಶೇಖರ್. ಮೇದಾರ ಕೇತಯ್ಯ (ಎಂ.ಕೆ. ನಗರ) ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಇವರು ಮಂಗಳವಾರ ರಾತ್ರಿ ಮೃತಪಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಇವರ ಸಾವಿಗೆ ಕಾರಣ ತಿಳಿದಿಲ್ಲ.
ಮೃತರ ಶವಗಳನ್ನು ಪೋಸ್ಟ್ಮಾರ್ಟಂಗಾಗಿ ಬಿಎಂಸಿಆರ್ಸಿಗೆ ರವಾನೆ ಮಾಡಲಾಗಿದೆ. ಪೋಸ್ಟ್ಮಾರ್ಟಂ ಮಾಡಿದ ನಂತರ, ಶವಗಳನ್ನು ಮೃತರ ಕುಟುಂಬಗಳಿಗೆ ನೀಡಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು
ಬ್ರೂಸ್ಪೇಟೆ ಪೆÇಲೀಸರು ತಿಳಿಸಿದ್ದಾರೆ.
ಘಟನೆಯ ನಂತರ, ಸಭೆ ಸೇರಿದ್ದ ಮಂಗಳಮುಖಿಗಳು, ಮೃತರು ಇಬ್ಬರು ಪ್ರೇಮಿಗಳಾಗಿದ್ದರು. ಆಟೋ ಚಾಲಕನಾಗಿದ್ದ ಶೇಖರ್ಗೆ ಸುಹಾಸಿನಿಯು ಆಟೋವನ್ನು ಖರೀದಿಸಿ ಕೊಟ್ಟಿದ್ದಳು. ಶೇಖರ್ನ ವಿವಾಹವು ಯುವತಿಯ ಜೊತೆಯಲ್ಲಿ ನಿಶ್ಚಯವಾಗಿದ್ದು,
ಈ ಕಾರಣಕ್ಕಾಗಿಯೇ ಅವರಿಬ್ಬರಲ್ಲಿ ಪದೇ ಪದೇ ಭಿನ್ನಾಭಿಪ್ರಾಯಗಳು ಉಂಟಾಗಿ, ಜಗಳವಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ರಾಜೀ ಮಾಡಿದ್ದೆವು. ಇವತ್ತು ಸಂಶಯಾಸ್ಪದವಾಗಿ ಶವವಾಗಿದ್ದಾರೆ ಎಂದು ಅಳಲನ್ನು ತೊಡಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಶೇಖರ್ ಮತ್ತು ಸುಹಾಸಿನಿ ಲಿವಿಂಗ್ ಟುಗೆದರ್ ರೀತಿಯಲ್ಲಿದ್ದರು. ಯಾವುದೋ ಕಾರಣಕ್ಕಾಗಿ ಜಗಳವಾದ ನಂತರ ಇಬ್ಬರೂ ಮೃತಪಟ್ಟಿರಬೇಕು ಎಂದು ಶಂಕಿಸಲಾಗುತ್ತಿದೆ. ಪೋಸ್ಟ್ಮಾರ್ಟಂ ವರದಿ ಬಂದ ನಂತರವೇ, ಇವರ ಸಾವಿನ ನಿಖರವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್