ಕೋಲ್ಕತ್ತಾ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಗುರುವಾರ ರಾತ್ರಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾಗೆ ಆಗಮಿಸಿದ್ದು ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕೋಲ್ಕತ್ತಾದ ಸಂತೋಷ್ ಮಿತ್ರ ಸ್ಕ್ವೇರ್ ಸರ್ವಜನಿನ್ ದುರ್ಗಾ ಉತ್ಸವ ಸಮಿತಿಯ ದುರ್ಗಾ ಪೆಂಡಲ್ ಉದ್ಘಾಟಿಸಲಿದ್ದಾರೆ.
ಈ ಪೆಂಡಲ್ನ್ನು ‘ಆಪರೇಷನ್ ಸಿಂಧೂರ್’ ಎಂಬ ದೇಶಭಕ್ತಿಯ ವಿಷಯದ ಮೇಲೆ ಅಲಂಕರಿಸಲಾಗಿದ್ದು, ಪಹಲ್ಗಾಮ್ ದಾಳಿ ನಂತರ ನಡೆದ ಯಶಸ್ವಿ ಸೇನಾ ಕಾರ್ಯಾಚರಣೆಯ ನೋಟವನ್ನು ಒದಗಿಸುತ್ತದೆ. ಬ್ರಹ್ಮೋಸ್ ಕ್ಷಿಪಣಿ ಮತ್ತು S-400 ವ್ಯವಸ್ಥೆಯ ಪ್ರತಿಕೃತಿಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿದ್ದು, ಸೇನೆಯ ಶೌರ್ಯ ಮತ್ತು ತ್ಯಾಗಕ್ಕೆ ಸಮರ್ಪಿತವಾಗಿದೆ.
ಶಾ ಅವರು ಇಂದು ಕಾಳಿಘಾಟ್ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ. ನಂತರ ಬಿಹಾರ ಪ್ರವಾಸ ಕೈಗೊಳ್ಳಲಿದ್ದು ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದ ತಂತ್ರಗಾರಿಕಾ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa