ಎಸ್.ಎಸ್. ಶಿಂಧೆ ನಿಧನಕ್ಕೆ ವಿಡಿಸಿ ಸಂತಾಪ
ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವೃತ್ತಿಪರ ನಿರ್ದೇಶಕರಾಗಿದ್ದ ಎಸ್. ಎಸ್. ಶಿಂಧೆ ನಿಧನಕ್ಕೆ ಬ್ಯಾಂಕ್ ಸಂತಾಪ ವ್ಯಕ್ತಪಡಿಸಿದೆ. ವಿಜಯಪುರ ಜಿಲ್ಲೆಯ ಹಿರುಯ ಲೆಕ್ಕ ಪರಿಶೋಧಕಾಗಿದ್ದ ಎಸ್.ಎಸ್. ಶಿಂಧೆ ಅವರು ಗುರುವಾರ ನಿಧನರಾದ ಸುದ್ದಿ ತಿಳಿ
ಎಸ್.ಎಸ್. ಶಿಂಧೆ ನಿಧನಕ್ಕೆ ವಿಡಿಸಿ ಸಂತಾಪ


ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವೃತ್ತಿಪರ ನಿರ್ದೇಶಕರಾಗಿದ್ದ ಎಸ್. ಎಸ್. ಶಿಂಧೆ ನಿಧನಕ್ಕೆ ಬ್ಯಾಂಕ್ ಸಂತಾಪ ವ್ಯಕ್ತಪಡಿಸಿದೆ.

ವಿಜಯಪುರ ಜಿಲ್ಲೆಯ ಹಿರುಯ ಲೆಕ್ಕ ಪರಿಶೋಧಕಾಗಿದ್ದ ಎಸ್.ಎಸ್. ಶಿಂಧೆ ಅವರು ಗುರುವಾರ ನಿಧನರಾದ ಸುದ್ದಿ ತಿಳಿಯುತ್ತಲೇ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ವಿಡಿಸಿಸಿ ನಿರ್ದೇಶಕರು, ಅಧಿಕಾರಿ - ಸಿಬ್ಬಂದಿ ವರ್ಗ ಸಂತಾಪ ವ್ಯಕ್ತಪಡಿಸಿದರು.

2014 ರಿಂದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವೃತ್ತಿಪರ ನಿರ್ದೇಶಕರಾಗಿ ಅತ್ಯಂತ ದಕ್ಷತೆ, ಸೇವಾ ಮನೋಭಾವದಿಂದ ಸಮರ್ಥವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದರು ಎಂದು ಗುಣಗಾನ ಮಾಡಿದರು.

ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ, ಸಿಇಒ ಎಸ್.ಎ.ಢವಳಗಿ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಜರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande