ಬಳ್ಳಾರಿ ಜಿಲ್ಲಾ `ಕಾಂಗ್ರೆಸ್ ಭವನ ಟ್ರಸ್ಟ್'ಗಾಗಿ ಸಂಗನಕಲ್ಲುನಲ್ಲಿ ದಾನಿಗಳಿಂದ ನಿವೇಶನ ನೋಂದಣಿ
ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸ್ವಂತ ಕಟ್ಟಡ ಇಲ್ಲದೇ ಸಾಕಷ್ಟು ಸುದ್ದಿಯಾಗುತ್ತಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕವು `ಕಾಂಗ್ರೆಸ್ ಭವನ ಟ್ರಸ್ಟ್'' ನಿರ್ಮಾಣಕ್ಕಾಗಿ ಸಂಗನಕಲ್ಲು ಬಳಿಯಲ್ಲಿ 10 ಸಾವಿರ ಚದುರ ಅಡಿ ನಿವೇಶನವನ್ನು ಗುರುವಾರ ನೋಂದಣಿ ಮಾಡಿಸಿದ್ದು, ಶೀಘ್ರದಲ್ಲೇ
ಬಳ್ಳಾರಿ ಜಿಲ್ಲಾ `ಕಾಂಗ್ರೆಸ್ ಭವನ ಟ್ರಸ್ಟ್'ಗಾಗಿ ಸಂಗನಕಲ್ಲುನಲ್ಲಿ ದಾನಿಗಳಿಂದ ನಿವೇಶನ ನೋಂದಣಿ


ಬಳ್ಳಾರಿ ಜಿಲ್ಲಾ `ಕಾಂಗ್ರೆಸ್ ಭವನ ಟ್ರಸ್ಟ್'ಗಾಗಿ ಸಂಗನಕಲ್ಲುನಲ್ಲಿ ದಾನಿಗಳಿಂದ ನಿವೇಶನ ನೋಂದಣಿ


ಬಳ್ಳಾರಿ ಜಿಲ್ಲಾ `ಕಾಂಗ್ರೆಸ್ ಭವನ ಟ್ರಸ್ಟ್'ಗಾಗಿ ಸಂಗನಕಲ್ಲುನಲ್ಲಿ ದಾನಿಗಳಿಂದ ನಿವೇಶನ ನೋಂದಣಿ


ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸ್ವಂತ ಕಟ್ಟಡ ಇಲ್ಲದೇ ಸಾಕಷ್ಟು ಸುದ್ದಿಯಾಗುತ್ತಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕವು `ಕಾಂಗ್ರೆಸ್ ಭವನ ಟ್ರಸ್ಟ್' ನಿರ್ಮಾಣಕ್ಕಾಗಿ ಸಂಗನಕಲ್ಲು ಬಳಿಯಲ್ಲಿ 10 ಸಾವಿರ ಚದುರ ಅಡಿ ನಿವೇಶನವನ್ನು ಗುರುವಾರ ನೋಂದಣಿ ಮಾಡಿಸಿದ್ದು, ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಮಾಡಲಿದೆ.

ಕೆಪಿಸಿಸಿ ಉಪಾಧ್ಯಕ್ಷ ವಿಜಯ್ ಮುಳಗುಂದ, ಕೆಪಿಸಿಸಿ ಕಚೇರಿಯ ಕಾರ್ಯದರ್ಶಿ ನಾರಾಯಣ್ ಅವರ ಸಮ್ಮುಖದಲ್ಲಿ, ಬಳ್ಳಾರಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿ ಕೃಷ್ಣ ಅವರು 10 ಸಾವಿರ ಚದುರ ಅಡಿಯ ನಿವೇಶವನ್ನು ಕಾಂಗ್ರೆಸ್ ಭವನ ಟ್ರಸ್ಟ್ ನ ಹೆಸರಿಗೆ ನೋಂದಣಿ ಮಾಡಿಸಿದರು.

ಶಾಸಕ ನಾರಾ ಭರತರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಜೆ.ಎಸ್. ಅಂಜಿನೆಯಲು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನಿವೇಶನ ನೋಂದಣಿ ಪ್ರಕ್ರಿಯೆನ್ನು ಪೂರ್ಣಗೊಳಿಸಿ, ನಿವೇಶನಕ್ಕೆ ಭೇಟಿ ನೀಡಿ, ಶೀಘ್ರದಲ್ಲೇ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಯೋಜನೆ ರೂಪಿಸುವ ಕುರಿತು ಚರ್ಚೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande