ಅಗ್ನಿವೀರ್ ಸೇನಾ ಭರ್ತಿ : ಮುಂದಿನ ಹಂತಕ್ಕೆ 518 ಯುವಕರ ಆಯ್ಕೆ
ರಾಯಚೂರು, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್ 8ರಂದು ಅಗ್ನಿವೀರ್ ಸೇನಾ ನೇಮಕಾತಿ ಭರ್ತಿ ಕಾರ್ಯಕ್ರಮ ಮೊದಲ ದಿನ ಯಶಸ್ವಿಯಾಗಿ ನಡೆದಿದೆ. ಈ ಸೇನಾ ನೇಮಕಾತಿಗೆ, ದೇಶಸೇವೆ ಬಯಸಿದ ಅನೇಕ ನಾನಾ ಜಿಲ್ಲೆಗಳ ಯುವಕರು ಉತ್ಸಾಹದಿಂದ ಭಾಗಿಯಾಗಲ
Agniveer Sena recruitment: 518 youth selected for next phase


ರಾಯಚೂರು, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್ 8ರಂದು ಅಗ್ನಿವೀರ್ ಸೇನಾ ನೇಮಕಾತಿ ಭರ್ತಿ ಕಾರ್ಯಕ್ರಮ ಮೊದಲ ದಿನ ಯಶಸ್ವಿಯಾಗಿ ನಡೆದಿದೆ.

ಈ ಸೇನಾ ನೇಮಕಾತಿಗೆ, ದೇಶಸೇವೆ ಬಯಸಿದ ಅನೇಕ ನಾನಾ ಜಿಲ್ಲೆಗಳ ಯುವಕರು ಉತ್ಸಾಹದಿಂದ ಭಾಗಿಯಾಗಲಿದ್ದು, ಮೊದಲ ದಿನ ಕೊಪ್ಪಳ ಜಿಲ್ಲೆಯಿಂದ ಒಟ್ಟು 587 ಅಭ್ಯರ್ಥಿಗಳು ವರದಿ ಮಾಡಿಕೊಂಡು ತಮ್ಮ ಸಾಮಥ್ರ್ಯ ಪ್ರದರ್ಶಿಸಿದರು.

ಶಾರೀರಿಕ ಪರೀಕ್ಷೆ, ಓಟ, ದೈಹಿಕ ಸಾಮಥ್ರ್ಯ ಪರೀಕ್ಷೆ ಸೇರಿದಂತೆ ಕಠಿಣ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 518 ಯುವಕರು ಮುಂದಿನ ಹಂತಕ್ಕೆ ಆಯ್ಕೆಯಾದರು.

ಈ ಸೇನಾ ಭರ್ತಿ ಪ್ರಕ್ರಿಯೆಯನ್ನು ಮೊದಲನೇ ದಿನ ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ಶಿಸ್ತುಬದ್ಧವಾಗಿ ಮುನ್ನಡೆಸಿದರು.

ಅಗ್ನಿವೀರ್ ಸೇನೆಗಾಗಿ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದ್ದು, ಅವರು ಶೀಘ್ರದಲ್ಲೇ ತರಬೇತಿಗೆ ಹಾಜರಾಗಲಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು.

ಭಾವುಕರಾದ ಕುಟುಂಬಸ್ಥರು: ತಮ್ಮ ತಮ್ಮ ಕುಟುಂಬದ ಯುವಕರ ಸೇನಾ ಭರ್ತಿ ನೋಡಲು ಮತ್ತು ಅವರಿಗೆ ಸಹಾಯ ಮಾಡಲು ಕುಟುಂಬದವರು ಆಗಮಿಸಿದ್ದರು. ಶಾರೀರಿಕ ಪರೀಕ್ಷೆಯ ಹಂತದಲ್ಲಿ ಯುವಕರು ಪಾಸಾಗಿದ್ದನ್ನು ಕಂಡು ಕೆಲವರು ಭಾವುಕರಾದರು.

ಯುವಕರಿಗೆ ಅಭಿನಂದನೆ ತಿಳಿಸಿದರು. ದೇಶಸೇವೆಯ ಕನಸು ಹೊತ್ತು ಅದನ್ನು ಸಾಕಾರಗೊಳಿಸಲು ಸೇನಾ ಭರ್ತಿಗೆ ಆಗಮಿಸಿ, ಶಾರಿರೀಕ ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿ ಮುಂದಿನ ಹಂತಕ್ಕೆ ಕಾಲಿಟ್ಟ ಯುವಕರ ಮೊಗದಲ್ಲಿ ಸಂತಷ ಮತ್ತು ದೇಸೆ ಸೇವೆಗೆ ತಾನು ಆಯ್ಕೆಯಾಗುತ್ತೇನೆ ಎನ್ನುವ ಹೆಮ್ಮೆಯ, ವಿಶ್ವಾಸದ ಭಾವ ಕಾಣಿಸಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande