ಕಂಪ್ಲಿ, 31 ಜುಲೈ (ಹಿ.ಸ.) :
ಆ್ಯಂಕರ್ : ದ್ವಿಚಕ್ರ ವಾಹನಗಳನ್ನು ಕಳುವು ಮಾಡಿ, ಮಾರಾಟ ಮಾಡುತ್ತಿದ್ದ ಇಬ್ಬರು ಯುವಕನ್ನು ಪೊಲೀಸರು ಬಂಧಿಸಿ 19 ಲಕ್ಷ ರೂಪಾಯಿ ಮೌಲ್ಯದ 11 ವಾಹನಗಳನ್ನು ವಶಕ್ಕೆ ತೆಗೆದುಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರು ದಿನೇಶ್ ಮತ್ತು ಯಶ್ವಂತ್ ಅಲಿಯಾಸ್ ಬಂಟಿ. ಬಂಧಿತರು ಕಂಪ್ಲಿ ಪಟ್ಟಣದ ಎಲ್.ಜಿ. ಕಾರ್ತಿಕ, ಕೃಷ್ಣ, ಮೆಟ್ರಿ ಬಾಷ ಸೇರಿ ಕಳೆದ ಒಂದು ಕಂಪ್ಲಿ ಪಟ್ಟಣ ಮತ್ತು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ತುಮಕೂರು ಬಸ್ ನಿಲ್ದಾಣ, ಚಿತ್ರದುರ್ಗ ಬಸ್ ನಿಲ್ದಾಣ, ದಮ್ಮೂರು ಗ್ರಾಮ, ಸಿಂಧನೂರು ಅಂಬಾಮಠ ಹಾಗೂ ಆಂಧ್ರ ಪ್ರದೇಶದ ವಿಡಪನಕಲ್ಲು, ಬಳ್ಳಾರಿ ಜಿಲ್ಲೆಯ ತೋರಣಗಲ್ಲು, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲ್ವೆ ಸ್ಟೇಷನ್ನಲ್ಲಿ ಕಳ್ಳತನ ಮಾಡಿರುವ 09 ಲಕ್ಷ ರೂಪಾಯಿ ಬೆಲೆಬಾಳುವ 11 ಮೋಟರ್ ಸೈಕಲ್ಗಳ ಮಾಹಿತಿ ನೀಡಿದ್ದು, ಪೊಲೀಸರು ಈ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ತಂಡಗಳನ್ನು ರಚಿಸಿದ್ದಾರೆ.
ಕಂಪ್ಲಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್