ನಿವೃತ್ತ ಮುಖ್ಯ ಗುರು ಸಿ.ಎಚ್.ಎಂ. ಬಸವರಾಜ್ ನಿಧನ
ಬಳ್ಳಾರಿ, 23 ಜುಲೈ (ಹಿ.ಸ.) : ಆ್ಯಂಕರ್ : ಶ್ರೀ ಸದ್ಗುರು ಅಲ್ಲೀಪುರ ಮಹಾದೇವತಾತ ನವರ ಶಿಷ್ಯರು, ಶ್ರೀ ಸದ್ಗುರು ಮಹಾದೇವ ತಾತನವರ ಮಠದ ಆಡಳಿತ ಮಂಡಳಿಯ ಸದಸ್ಯರು, ನಿವೃತ್ತ ಮುಖ್ಯ ಗುರುಗಳಾಗಿದ್ದ ಸಿ.ಎಚ್.ಎಂ. ಬಸವರಾಜ ಅವರು ಬುಧವಾರ ನಸುಕಿನಲ್ಲಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದು, ಬಳ
ನಿವೃತ್ತ ಮುಖ್ಯ ಗುರು ಗಳಾದ ಸಿ.ಎಚ್.ಎಂ. ಬಸವರಾಜ್ ನಿಧನ


ಬಳ್ಳಾರಿ, 23 ಜುಲೈ (ಹಿ.ಸ.) :

ಆ್ಯಂಕರ್ : ಶ್ರೀ ಸದ್ಗುರು ಅಲ್ಲೀಪುರ ಮಹಾದೇವತಾತ ನವರ ಶಿಷ್ಯರು, ಶ್ರೀ ಸದ್ಗುರು ಮಹಾದೇವ ತಾತನವರ ಮಠದ ಆಡಳಿತ ಮಂಡಳಿಯ ಸದಸ್ಯರು, ನಿವೃತ್ತ ಮುಖ್ಯ ಗುರುಗಳಾಗಿದ್ದ ಸಿ.ಎಚ್.ಎಂ. ಬಸವರಾಜ ಅವರು ಬುಧವಾರ ನಸುಕಿನಲ್ಲಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದು, ಬಳ್ಳಾರಿಯಲ್ಲಿ ಸಂಜೆ ಅಂತ್ಯಸಂಸ್ಕಾರ ನೆರವೇರಲಿದೆ.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ, ಸೊಸೆಯಂದಿರರು - ಅಳಿಯ, ಮೊಮ್ಮಕ್ಕಳು, ಬಂಧುವರ್ಗ, ಅಪಾರ ಸಂಖ್ಯೆಯ ಶಿಷ್ಯವರ್ಗ, ಅಭಿಮಾನಿಗಳು - ಆಪ್ತರು - ಮಿತ್ರರು ಹಾಗೂ ವಿದ್ಯಾರ್ಥಿ ವೃಂದವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಬುಧವಾರ ಸಂಜೆ 4.30 ಕ್ಕೆ ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ.

ಮೃತರ ಆತ್ಮಕ್ಕೆ ಶಾಂತಿ ಕೋರಿ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಆಜೀವ ಸದಸ್ಯರು, ಶ್ರೀಮಹಾದೇವ ತಾತನವರ ಭಕ್ತವೃಂದ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

ವಿವರಗಳಿಗಾಗಿ ರಮೇಶ್ ಸಿ.ಎಚ್.ಎಂ. ಮೊಬೈಲ್ : 9686669482 ಗೆ ಕರೆ ಮಾಡಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande