ವಿಜಯಪುರ, 17 ಜುಲೈ (ಹಿ.ಸ.) :
ಆ್ಯಂಕರ್ : ಮನೆಯ ಎದುರಿನ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಜೆಸಿಬಿ ಮೂಲಕ ತೆರವು ಮಾಡಿರುವ ಘಟನೆ ವಿಜಯಪುರ ನಗರದ ಶಾಪೇಟೆಯಲ್ಲಿ ನಡೆದಿದೆ.
ನಗರದ ಶಾಪೇಟೆಯಲ್ಲಿ ಮನೆಯ ಎದುರಿನ ಜಾಗದಲ್ಲಿ ಕಂಪೌಂಡ ಸೇರಿದಂತೆ ಅಂಗಡಿಗಳ ನಿರ್ಮಾಣ ಮಾಡಲಾಗಿತ್ತು. ಇನ್ನೂ ತೆರವು ಮಾಡಲು ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ನೋಟೀಸ್ ಕೂಡ ನೀಡಿದರು. ತೆರವು ಮಾಡದ ಕಾರಣ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಅಲ್ಲದೇ, ಶ್ರೀಮಂತರು, ಬಡವರು ಅನ್ನದೇ ಎಲ್ಲರ ಜಾಗವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande