ವಿಜಯಪುರ, 16 ಜುಲೈ (ಹಿ.ಸ.) :
ಆ್ಯಂಕರ್ : ಹೃದಯಾಘಾತದಿಂದ ವಿಜಯಪುರದಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದಲ್ಲಿ ನಡೆದಿದೆ.
ಸಿದ್ದಾರ್ಥ ಬಸವರಾಜ ಬಡಿಗೇರ (18) ಹೃದಯಾಘಾತದಿಂದ ಸಾವು. ಮನೆಯಲ್ಲಿ ಮಲಗಿರುವಾಗಲೇ ಸಿದ್ದಾರ್ಥಗೆ ಹೃದಯಾಘಾತ ಆಗಿದೆ. ಮನೆಯರು ಸಂತೆಗೆಂದು ಹೊರಗೆ ಹೋಗಿದ್ದರು. ಸಂತೆಯಿಂದ ಬಂದ ತಾಯಿ ಚಹಾ ಕುಡಿಯಲು ಎಬ್ಬಿಸಿದಾಗ ಗೊತ್ತಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande