ಕಲಬುರಗಿ, 10 ಜುಲೈ (ಹಿ.ಸ.) :
ಆ್ಯಂಕರ್ : ಕಲಬುರಗಿಯಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದೆ. ತೀವ್ರ ಹೃದಯಾಘಾತದಿಂದ ಕಾಲೇಜು ಉಪಪ್ರಾಂಶುಪಾಲ ಗುರುಬಸಯ್ಯ ಸಾಲಿಮಠ ಮೃತರಾಗಿದ್ದಾರೆ.
ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯ ನಿವಾಸಿ ಗುರುಬಸಯ್ಯ ಸಾಲಿಮಠ ಮೃತ ದುದೈವಿ. ಗುರುಬಸಯ್ಯ ಅವರು ಕೋಹಿನೂರು ಪದವಿ ಕಾಲೇಜಿನಲ್ಲಿ ಉಪಪ್ರಾಂಶುಪಾಲರು. ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ಬಂದು ನೀರು ಕುಡಿದು ಕುಳಿತ್ತಿದ್ದ ವೇಳೆ ವಾಂತಿಯಾಗಿ ತೀವ್ರ ಹೃದಯಘಾತದಿಂದ ಗುರುಬಸಯ್ಯ ಸಾಲಿಮಠ ಸಾವಿಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಪ್ರಿಯಾಂಕಾ ಹೊಸಮನಿ