ಕರವೇ ಸಂಘಟನೆಯ ನೂತನ ಕಾರ್ಯಕರ್ತರ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ
ಗದಗ, 09 ಜೂನ್ (ಹಿ.ಸ.) : ಆ್ಯಂಕರ್ : ಗದಗ ಬೆಟಗೇರಿ ನಗರದ ವಾರ್ಡ್ ನಂ. 3, ಬಣ್ಣದ ನಗರದ ಸರಕಾರಿ ಶಾಲೆಯ ನಂ. 11ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ ನಾರಾಯಣಗೌಡರ ಹೋರಾಟಗಳನ್ನು, ಕರವೇ ತತ್ವ-ಸಿದ್ಧಾಂತಗಳನ್ನ ಮೆಚ್ಚಿ, ವಾರ್ಡ್ ಘಟಕವನ್ನು ಉದ್ಘಾಟನೆಗೊಳಿಸಿ, ನೂತ
ಪೋಟೋ


ಗದಗ, 09 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಬೆಟಗೇರಿ ನಗರದ ವಾರ್ಡ್ ನಂ. 3, ಬಣ್ಣದ ನಗರದ ಸರಕಾರಿ ಶಾಲೆಯ ನಂ. 11ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ ನಾರಾಯಣಗೌಡರ ಹೋರಾಟಗಳನ್ನು, ಕರವೇ ತತ್ವ-ಸಿದ್ಧಾಂತಗಳನ್ನ ಮೆಚ್ಚಿ, ವಾರ್ಡ್ ಘಟಕವನ್ನು ಉದ್ಘಾಟನೆಗೊಳಿಸಿ, ನೂತನ ಕಾರ್ಯಕರ್ತರ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಗದಗ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹೆಚ್ ಅಬ್ಬಿಗೇರಿರವರು ವಹಿಸಿಕೊಂಡು ಮಾತನಾಡಿ ತಮ್ಮ ವಾರ್ಡಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಸಂಘಟನಾತ್ಮಕವಾದ ಹೋರಾಟಗಳನ್ನ ಹಮ್ಮಿಕೊಳ್ಳೋಣ, ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು.

ಸಭೆಯ ನೇತೃತ್ವವನ್ನು ವಹಿಸಿಕೊಂಡ ಜಿಲ್ಲಾ ಉಪಾಧ್ಯಕ್ಷರಾದ ವಿನಾಯಕ ಬದಿ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಸಂಘಟನೆ ಮಾಡಲು ಪ್ರೋತ್ಸಾಹಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಣ ಕುಂಬಾರ್ ಇವರನ್ನು ಅಧ್ಯಕ್ಷರು ಬೆಟಗೇರಿ ವಾರ್ಡ್ ನಂ. 3ಗೆ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಈಳಿಗೆರ್, ಮಹಿಳಾ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿ ಹಿತ್ತಲಮನಿ, ಕುಮಾರ್ ರೇವಣ್ಣವರ್, ತೌಶಿಫ್ ಡಾಲಾಯತ್, ಶಿವು ಮಠದ, ದಾವಲಸಾಬ ತಹಶೀಲ್ದಾರ ಗದಗ ತಾಲೂಕ ಉಪಾಧ್ಯಕ್ಷರು, ರಫೀಕ್ ನದಾಫ್, ಇಸಾಕ್ ನದಾಫ್, ಸಿರಾಜ್ ಹೊಸಮನಿ ವಾರ್ಡಿನ ಗುರು-ಹಿರಿಯರು, ಯುವಕರು, ಮಹಿಳೆಯರು

ಹಾಗೂ ಇನ್ನೂ ಅನೇಕ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande