ಸರಕಾರಿ ಶಾಲೆಯ ಅವ್ಯವಸ್ಥೆ ಸರಿ ಮಾಡಲು ಒತ್ತಾಯ
ಗದಗ, 09 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಯರೇಬೇಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಲ್ಪ ಮಳೆಯಾದರು ಸಾಕು ಅಪಾರ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಶಾಲೆಗೆ ಬರುವ ಮಕ್ಕಳಿಗೆ ನಿತ್ಯವೂ ತೊಂದರೆ ಆಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಿಕ್ಷಣ ಇಲಾ
ಪೋಟೋ


ಗದಗ, 09 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಯರೇಬೇಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಲ್ಪ ಮಳೆಯಾದರು ಸಾಕು ಅಪಾರ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಶಾಲೆಗೆ ಬರುವ ಮಕ್ಕಳಿಗೆ ನಿತ್ಯವೂ ತೊಂದರೆ ಆಗುತ್ತಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಿಪಡಿಸಲು ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. 1ನೇ ತರಗತಿ ಪ್ರವೇಶ ನಡೆದಿದ್ದು ಸಧ್ಯ 140ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಆವರಣವು ತಗ್ಗು ಪ್ರದೇಶದಂತಿದೆ. ಇದರಿಂದಾಗಿ ಸ್ವಲ್ಪ ಮಳೆಯಾದರೂ ಮಕ್ಕಳು ಶಾಲೆಯೊಳಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಮಕ್ಕಳು ಕಾಲು ಜಾರಿ ಬಿದ್ದು ಮನೆಗೆ ಹೋಗಿರುವ ಘಟನೆಗಳು ಸಹ ನಡೆದಿವೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. 1ನೇ ತರಗತಿ ಪ್ರವೇಶ ನಡೆದಿದ್ದು ಸಧ್ಯ 140ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಆವರಣವು ತಗ್ಗು ಪ್ರದೇಶದಂತಿದೆ.

ಸ್ವಲ್ಪ ಮಳೆಯಾದರೂ ಮಕ್ಕಳು ಶಾಲೆಯೊಳಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಮಕ್ಕಳು ಕಾಲು ಜಾರಿ ಬಿದ್ದು ಮನೆಗೆ

ಹೋಗಿರುವ ಘಟನೆಗಳು ಸಹ ನಡೆದಿವೆ. ‘1ನೇ ತರಗತಿ ಮಕ್ಕಳ ತುಂಬಾ ಚಿಕ್ಕವರಿರುತ್ತಾರೆ. ಅವರು ಆಟವಾಡುತ್ತಾ ಆಳವಾದ ತಗ್ಗಿನಲ್ಲಿ ಬಿದ್ದು

ಏನಾದರು ಘಟನೆ ನಡೆದರೆ ಯಾರು ಹೊಣೆ’ ಎಂದು ಪಾಲಕರು ಮಳೆ ಬಂದಾಗ ಮಕ್ಕಳು ಶಾಲೆಗೆ ಕಳಿಸುವುದನ್ನೇ ನಿಲ್ಲಿಸುತ್ತಾರೆ.

ಶಾಲೆಯ ಮುಂದಿರುವ ಚರಂಡಿಗೆ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರೆ ತೊಂದರೆ ಇರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande