ದಾವಣಗೆರೆ, 27 ಜೂನ್ (ಹಿ.ಸ.):
ಆ್ಯಂಕರ್:ದಾವಣಗೆರೆಯಲ್ಲಿ ಜೂನ್ 27ರಂದು ಬೆಸ್ಕಾಂ ವತಿಯಿಂದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಜಾಗೃತಿ ಜಾಥಾ ಆಯೋಜನೆಯಾಯಿತು. ಜಾಥಾವಿಗೆ ಬೆಸ್ಕಾಂ ಅಧೀಕ್ಷಕ ಅಭಿಯಂತರ ಪಾಟೀಲ್ ಚಾಲನೆ ನೀಡಿದರು.
ವಿದ್ಯುತ್ ಅಪಘಾತದಿಂದ ಜೀವಹಾನಿ ತಡೆಯಲು, ಪ್ರಮಾಣಿತ ಉಪಕರಣಗಳು, ಭೂಸಂಪರ್ಕ ವ್ಯವಸ್ಥೆ (ಅರ್ಥಿಂಗ್), ಆರ್ಸಿಡಿ, ಹೆಲ್ಮೆಟ್, ಸುರಕ್ಷತಾ ಕನ್ನಡಕ, ಪಿಪಿಇ ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕೆಂದು ಅವರು ಎಚ್ಚರಿಸಿದರು. ವಿದ್ಯುತ್ ಉಪಕರಣಗಳ ಬಳಕೆಯಲ್ಲಿಯೂ ಸೂಕ್ತ ಜಾಗ್ರತೆ ಅಗತ್ಯವಿದೆ ಎಂದರು.
ಜಾಥಾ ಕೆಇಬಿ ಕಚೇರಿಯಿಂದ ಆರಂಭವಾಗಿ ಜಯದೇವ ಸರ್ಕಲ್, ರೈಲ್ವೆ ನಿಲ್ದಾಣ, ಅರುಣ ಸರ್ಕಲ್, ರಾಮ್ & ಕೋ ಸರ್ಕಲ್ ಮೂಲಕ ಗುಂಡಿ ಸರ್ಕಲ್ವರೆಗೆ ಸಾಗಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ದೇಸಾಯಿ, ಕೆ.ಸಿ.ಕುಮಾರಸ್ವಾಮಿ, ಶಿವಕುಮಾರ ಪಾಟೀಲ್, ತಿಪ್ಪೇಸ್ವಾಮಿ, ಸಂಜೀವಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa