ಕೋಲಾರ, ೨೧ ಜೂನ್ (ಹಿ.ಸ) :
ಆ್ಯಂಕರ್ : ನಗುವಾಗ ಎಲ್ಲರು ನೆಂಟರು. ಅಳುವಾಗ ಯಾರು ಇರುವುದಿಲ್ಲ ಎಂಬ ಮಾತಿದೆ. ಅಧಿಕಾರ ಇರುವಾಗ ಸುತ್ತಮುತ್ತಲೂ ಜನ ಸದಾ ಇರುತ್ತಾರೆ. ಆದರೆ ಅಧಿಕಾರ ಇಲ್ಲದಿದ್ದಾಗ ಹಿಂದೆ ಮುಂದೆ ಜನ ಇರುವುದಿಲ್ಲ ಎಂಬುದಕ್ಕೆ ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ನಿದರ್ಶನವಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಮುನಿಸ್ವಾಮಿ ಶತಶೃಂಗ ಪರ್ವತ ಶ್ರೇಣಿಯ ಹೊಸಹಳ್ಳಿಯಲ್ಲಿ ಸಾವಿರಾರು ಜನರನ್ನು ಸಂಘಟಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿ ದಾಖಲೆ ಸೃಷ್ಠಿ ಮಾಡಿದ್ದರು. ಸಾವಿರಾರು ಮಂದಿ ಯೋಗಪಟುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸರ್ಕಾರದ ಅನುದಾನಕ್ಕೆ ಕಾಯದೆ ಸಂಪನ್ಮೂಲಗಳನ್ನು ಕ್ರೋಡಿಕರಿಸಿ ಅದ್ದೂರಿಯಾಗಿ ಯೋಗ ದಿನಾಚರಣೆ ಆಚರಿಸಿದ್ದರು.ಭಾವಹಿಸಿದ್ದ ಎಲ್ಲರಿಗೂ ಉಪಹಾರ ಕುಡಿಯುವ ನೀರು, ಹಣ್ಣು ಹಾಗೂ ವೈದ್ಯಕೀಯ ವ್ಯವಸ್ಥೆ ಮಾಡಿದ್ದರು. ಮುಂದಿನ ವರ್ಷ ಬೆಟ್ಟದಲ್ಲಿ ಯೋಗ ಕೇಂದ್ರ ನಿರ್ಮಿಸಲಾಗುವುದು. ಅಲ್ಲಿ ಪ್ರತಿವರ್ಷ ಯೋಗ ಆಚರಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಮುಂದಿನ ವರ್ಷ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಮುನಿಸ್ವಾಮಿ ಎಂದರೆ ಕಾಂಗ್ರೆಸ್ನವರು ಮೂಗು ಮುರಿಯುತ್ತಿದ್ದರು. ಇನ್ನು ಕಾಂಗ್ರೆಸ್ ಅವಧಿಯಲ್ಲಿ ಬೆಟ್ಟದಲ್ಲಿ ಯೋಗ ಕೇಂದ್ರ ಸ್ಥಾಪನೆ ಮಾಡುವುದಾದರೂ ಎಲ್ಲಿ. ಮುನಿಸ್ವಾಮಿಯವರ ಕನಸು ಕಮರಿ ಹೋಯಿತು.
ಅಧಿಕಾರ ಯಾರಿಗೂ ಶಾಶ್ವಥವಲ್ಲ. ಸಂಸತ್ ಚುನಾವಣೆಗೆ ಸ್ಪರ್ಧಿಸಲು ಬಿ.ಜೆ.ಪಿ. ಟಿಕೆಟ್ ನಿರಾಕರಿಸಿತು. ನನಗೆ ದೇಶ ಮತ್ತು ಪ್ರಧಾನಿ ಮೋದಿಯವರು ಮುಖ್ಯ ಎಂದ ಮುನಿಸ್ವಾಮಿ ಬಿಜೆಪಿ ಜೆಡಿಎಸ್ ಮೈತ್ರಿ ಆಭ್ಯರ್ಥಿ ಮಲ್ಲೇಶ್ ಬಾಬು ಪರ ಚುನಾವಣೆಯಲ್ಲಿ ಕೆಲಸ ಮಾಡಿದರು. ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.
ಅಧಿಕಾರ ಇಲ್ಲದಿದ್ದರು ಸಹ ಮುನೀಶಾಮಿ ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ. ಶನಿವಾರ ಶತಶೃಂಗ ಪರ್ವತಕ್ಕೆತೆರಳಿ ಯೋಗ ಮಾಡಿ ಫೇಸ್ ಬುಕ್ನಲ್ಲಿ ಕೆಂಪು ಟೀ ಶರ್ಟ್ನಲ್ಲಿ ಒಬ್ಬರೆ ಇದ್ದ ಚಿತ್ರ ಪೊಸ್ಟ್ ಮಾಡಿದ್ದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಮ್ಮ ದೇಶದ ಕೊಡುಗೆ. ಯೋಗ ಎಂಬುದು ಜೀವನಶೈಲಿ, ಜೀವಿಸುವ ವಿಧಾನ. ಇದನ್ನು ಒಂದು ದಿನಕ್ಕೆ ಸೀಮಿತ ಮಾಡಬಾರದು. ಯೋಗಾಭ್ಯಾಸ ಮಾಡುವುದರಿಂದ ದೇಹ ಸ್ರವಿಸುವ ಹಾರ್ಮೋನುಗಳಲ್ಲಿ ಸಮತೋಲನ ಇರುತ್ತದೆ. ಎಲ್ಲ ಜೀವಕೋಶಗಳನ್ನು ಬಲಪಡಿಸುತ್ತದೆ ಯೋಗವನ್ನು ಮಾಡೋಣ, ಆರೋಗ್ಯವಾಗಿರೋಣ ಎಂದು ಫೇಸ್ ಬುಕ್ನಲ್ಲಿ ಆಶಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಬಿಳಿ ಟೀಶರ್ಟ್ನಲ್ಲಿದ್ದ ಚಿತ್ರ ಪೇಸುಬುಕನಲ್ಲಿ ಪೋಸ್ಟ ಮಾಡಿದ್ದರು. ದಂಡಿಲ್ಲ ದಳವಾಯಿ ಇಲ್ಲ ಮುನಿಸ್ವಾಮಿ ಎಂದರೆ ಬೆಲ್ಲವನ್ನು ಕಂಡು ಮುತ್ತಿಕ್ಕುವ ಇರುವೆಗಳಂತೆ ಮಾಧ್ಯಮ ಪ್ರತಿನಿಧಿಗಳು ಸುತ್ತುವರೆಯುತ್ತಿದ್ದರು. ಆದರೆ ಇಂದು ಅವರ ಜೊತೆಯಲ್ಲಿ ಕೆಲವೇ ಮಂದಿ ಸ್ನೇಹಿತರಿದ್ದರು. ಸ್ನೇಹಿತರ ಜೊತೆಯಲ್ಲಿ ಯೋಗ ಮಾಡಿದ ಚಿತ್ರಗಳನ್ನು ಮುನಿಶಾಮಿ ಹಂಚಿಕೊಂಡಿದ್ದಾರೆ
ಚಿತ್ರ : ಕೋಲಾರ ಮಾಜಿ ಸಂಸದ ಎಸ್.ಮುನಿಸ್ವಾಮಿ ಶತಶೃಂಗ ಪರ್ವತ ಶ್ರೇಣಿಯಲ್ಲಿ ಯೋಗ ಮಾಡಿ ಹಂಚಿಕೊಂಡಿರುವ ಚಿತ್ರ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್