ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ವಿಧಾನ ಸೌಧದ ಮುಂಭಾಗದಲ್ಲಿ ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಸಾವಿರಾರು ಯೋಗಪಟುಗಳು ಪಾಲ್ಗೊಂಡ ಯೋಗ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ನಟಿ ಸಾನ್ಯ ಅಯ್ಯರ್, ಶೈನ್ ಶೆಟ್ಟಿ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪಾಲ್ಗೊಂಡು ಯೋಗಾಸನಗಳನ್ನು ಪ್ರದರ್ಶಿಸಿದರು.
ಯೋಗ ಮಾಡಿ ನಿರೋಗಿ ಆಗಿ ಎಂಬ ಕಿವಿಮಾತು ನೀಡಿದ ರಾಜ್ಯಪಾಲರು, “ಯೋಗ ಭಾರತದ ಸಂಸ್ಕೃತಿಯ ಪ್ರತೀಕ. ಇದು ವಿಶ್ವದ ಹಲವಾರು ರಾಷ್ಟ್ರಗಳಿಗೆ ಆರೋಗ್ಯಪೂರ್ಣ ಸಂಬಂದಗಳ ಸೇತುಬಂಧವಾಗಿದೆ. ಕರ್ನಾಟಕ ಸರ್ಕಾರದಿಂದ ಉತ್ತಮ ಆಚರಣೆ ನಡೆದಿದ್ದು ಪ್ರಶಂಸನೀಯ,” ಎಂದರು.
“ನಾನು ಚಿಕ್ಕವಯಸ್ಸಿನಿಂದ ಯೋಗ ಮಾಡುತ್ತಿದ್ದೇನೆ. ಎಲ್ಲರೂ ದಿನವೂ ಯೋಗ ಅಭ್ಯಾಸ ಮಾಡಬೇಕು” ಎಂದು ಕರೆ ನೀಡಿದರು. ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎನ್ನುವ ಘೋಷವಾಕ್ಯವನ್ನು ಅವರು ಶ್ಲಾಘಿಸಿದರು.
ಈ ಸಂದರ್ಭ ಹಲವು ಸಂಸ್ಥೆಗಳ ಯೋಗಪಟುಗಳು, ಹಿರಿಯ ರಾಜಕೀಯ ಮುಖಂಡರು, ಮತ್ತು ಸಾರ್ವಜನಿಕರು ಕೂಡ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa