ಬೆಂಗಳೂರು, 19 ಜೂನ್ (ಹಿ.ಸ.):
ಆ್ಯಂಕರ್:
ಬೆಂಗಳೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿಕೆ ಸುರೇಶ್ ಆಯ್ಕೆ ಆಗಿದ್ದಾರೆ. ಸದಸ್ಯರು ಹಾಗೂ ಆಯ್ಕೆಗೊಂಡ ಪ್ರತಿನಿಧಿಗಳಿಂದ ಅವರು ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸೋಲು ಅನುಭವಿಸಿದ ಬಳಿಕ ಡಿಕೆ ಸುರೇಶ್ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದರು ಹಾಗೂ ಕೆಲ ಕಾಲ ವಿಶ್ರಾಂತಿಯಲ್ಲಿ ಇದ್ದರು. ಇದೀಗ ಅವರು ಬಮೂಲ್ ಅಧ್ಯಕ್ಷರಾಗಿ ಮರಳಿ ಬಂದಿದ್ದಾರೆ.
ರೈತರು ಮತ್ತು ಸೊಸೈಟಿಯವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ನನಗೆ ನೀಡಿದ ಭರವಸೆಯನ್ನ ನಾನು ನಿಭಾಯಿಸುತ್ತೇನೆ. ಈ ಸ್ಥಾನದಲ್ಲಿ ರೈತರಿಗೆ ಸಹಕಾರಿಯಾಗುವ ಕೆಲಸಗಳನ್ನು ಮಾಡುತ್ತೇನೆ, ಎಂದು ಡಿಕೆ ಸುರೇಶ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa