ಯೋಗಾಸನಗಳು ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ಪೂರಕ : ಸಿ.ಕೆ. ಪ್ರಕಾಶ್
ಕೋಳೂರು, 17 ಜೂನ್ (ಹಿ.ಸ.) : ಆ್ಯಂಕರ್ : ಯೋಗಾಸನಗಳನ್ನು ಪ್ರತಿನಿತ್ಯ ಪಾಲನೆ ಮಾಡಿದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸುಲಭ ಎಂದು ಯೋಗ ಶಿಕ್ಷಕ ಸಿ.ಕೆ. ಪ್ರಕಾಶ್ ಅವರು ತಿಳಿಸಿದ್ದಾರೆ. ಕೋಳೂರು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್
ಯೋಗಾಸನಗಳು ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ಪೂರಕ : ಸಿ.ಕೆ. ಪ್ರಕಾಶ್


ಯೋಗಾಸನಗಳು ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ಪೂರಕ : ಸಿ.ಕೆ. ಪ್ರಕಾಶ್


ಯೋಗಾಸನಗಳು ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ಪೂರಕ : ಸಿ.ಕೆ. ಪ್ರಕಾಶ್


ಕೋಳೂರು, 17 ಜೂನ್ (ಹಿ.ಸ.) :

ಆ್ಯಂಕರ್ : ಯೋಗಾಸನಗಳನ್ನು ಪ್ರತಿನಿತ್ಯ ಪಾಲನೆ ಮಾಡಿದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸುಲಭ ಎಂದು ಯೋಗ ಶಿಕ್ಷಕ ಸಿ.ಕೆ. ಪ್ರಕಾಶ್ ಅವರು ತಿಳಿಸಿದ್ದಾರೆ.

ಕೋಳೂರು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಮಂಗಳವಾರ ನಡೆದ 11ನೇ ಅಂತಾರಾಷ್ಟ್ರೀಯ

ಯೋಗ ದಿನಾಚರಣೆ - 2025ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯೋಗವನ್ನು ಪಾಲನೆ ಮಾಡಲು ವಯಸ್ಸು - ಜಾತಿ ; ಧರ್ಮ ಯಾವುದರ ನಿರ್ಬಂಧಗಳಿಲ್ಲ. ಯಾರು ಬೇಕಾದರೂ ಯೋಗವನ್ನು ಅಭ್ಯಾಸ ಮಾಡಬಹುದು ಎಂದರು.

ವೈದ್ಯಾಧಿಕಾರಿ ಡಾ. ಕಲ್ಯಾಣಿ ಅವರು, ಯೋಗಾಸನಗಳು ಪ್ರತಿಯೊಬ್ಬರಿಗೂ ಆರೋಗ್ಯ ಸಂರಕ್ಷಣೆಗಾಗಿ ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗಾಸನಗಳನ್ನು ಕಲಿಯಲು ಆಸಕ್ತರಾಗಬೇಕು ಎಂದರು.

ಕೋಳೂರು ಗ್ರಾಮದಲ್ಲಿ ಯೋಗ ಜಾಗೃತಿ ಜಾಥಾವನ್ನು ನಡೆಸಲಾಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶನ ಮಾಡಿ, ಗ್ರಾಮಸ್ಥರ ಗಮನ ಸೆಳೆದು ಅಪಾರ ಮೆಚ್ಚುಗೆ ಪಡೆದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande