ರಾಯಚೂರು, 17 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್), ರಾಯಚೂರು ಘಟಕದ ವತಿಯಿಂದ ಜೂನ್ 18ರ ಸಂಜೆ 5 ಗಂಟೆಗೆ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಪ್ರಮಾಣ ಪಿಯು ಕಾಲೇಜಿನಲ್ಲಿ “ಅನಪೇಕ್ಷಿತ ವಾಣಿಜ್ಯ ಸಂವಹನ ಉಂಸೋಲಿಸಿಐಟೆಡ್ ಕಮರ್ಷಿಯಲ್ ಕಮ್ಯೂನಿಕೇಶನ್(ಯು.ಸಿ.ಸಿ) ಹಾಗೂ ಸ್ಪ್ಯಾಮ್” ಕುರಿತ ಗ್ರಾಹಕ ಶಿಕ್ಷಣ ಕಾರ್ಯಾಗಾರವನ್ನು ಸೈಬರ್ ಕ್ರೈಂ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಎನ್ಎಲ್, ರಾಯಚೂರು ಘಟಕದ ಜ್ಯೂನಿಯರ್ ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ದೂರಸಂಪರ್ಕ ಬಳಕೆದಾರರಿಗೆ ನಿರಂತರವಾಗಿ ಬರುತ್ತಿರುವ ಅನಗತ್ಯ ಕರೆಗಳು, ವಂಚನೆ ಉದ್ದೇಶದ ಸಂದೇಶಗಳು ಹಾಗೂ ಇತರೆ ಅನಪೇಕ್ಷಿತ ಸಂಪರ್ಕಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಾಗಾರವು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರೈ) ನ ನಿರ್ದೇಶನದಂತೆ ಆಯೋಜಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಎಸ್ಎನ್ಎಲ್ ರಾಯಚೂರಿನ ಉಪ ಮಹಾಪ್ರಬಂಧಕ ಶ್ರೀಕಾಂತ್, ಪ್ರಮಾಣ ಪಿಯು ಕಾಲೇಜಿನ ಪ್ರಾಂಶುಪಾಲ ಸಿ. ಸತ್ಯನಾರಾಯಣ, ಸೈಬರ್ ಕ್ರೈಂ ಡಿವೈಎಸ್ಪಿ ರಾಜಕುಮಾರ ವಜಂತ್ರಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಎನ್.ಕೆ. ನಾಗರಾಜ್ ಉಪಸ್ಥಿತರಿರುವರು.
ಬಿಎಸ್ಎನ್ಎಲ್ ಸಂಸ್ಥೆಯ ಎಲ್ಲಾ ದೂರಸಂಪರ್ಕ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜಾಗೃತಿ ಕಾರ್ಯಾಗಾರದಿಂದ ಪ್ರಯೋಜನ ಪಡೆಯಬೇಕೆಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್