ರಾಜಕೀಯ ಮೌಲ್ಯದ ಹುಡುಕಾಟ ನಡೆದಿದೆ : ಬಸವರಾಜ ಹೊರಟ್ಟಿ
ಬಳ್ಳಾರಿ, 16 ಜೂನ್ (ಹಿ.ಸ.) : ಆ್ಯಂಕರ್ : ಈ ದೇಶದಲ್ಲಿ ಮತ್ತು ಎಲ್ಲಾ ಹಂತಚ ಚುನಾವಣೆಗಳಲ್ಲಿ ಹಣ ಕೊಟ್ಟು - ಹಣ ಪಡೆದು ಓಟು ಪಡೆಯುವ - ಓಟು ಹಾಕುವ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ `ರಾಜಕೀಯ ಮೌಲ್ಯವನ್ನು ಹುಡುಕುವುದು ಅಸಾಧ್ಯ'' ಎಂದು ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರು ಅ
ದೇಶದಲ್ಲಿ ರಾಜಕೀಯ ಮೌಲ್ಯದ ಹುಡುಕಾಟ ನಡೆದಿದೆ : ಬಸವರಾಜ ಹೊರಟ್ಟಿ


ಬಳ್ಳಾರಿ, 16 ಜೂನ್ (ಹಿ.ಸ.) :

ಆ್ಯಂಕರ್ : ಈ ದೇಶದಲ್ಲಿ ಮತ್ತು ಎಲ್ಲಾ ಹಂತಚ ಚುನಾವಣೆಗಳಲ್ಲಿ ಹಣ ಕೊಟ್ಟು - ಹಣ ಪಡೆದು ಓಟು ಪಡೆಯುವ - ಓಟು ಹಾಕುವ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ `ರಾಜಕೀಯ ಮೌಲ್ಯವನ್ನು ಹುಡುಕುವುದು ಅಸಾಧ್ಯ' ಎಂದು ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಸೋಮವಾರ ಮಾತನಾಡಿದ ಅವರು, ರಾಜಕೀಯದಲ್ಲಿ ಮೌಲ್ಯ ಕಾಣೆಯಾಗುತ್ತಿದೆ.

ವ್ಯಕ್ತಿತ್ವ - ಮೌಲ್ಯ ಮತ್ತು ಆದರ್ಶಗಳನ್ನು ಹೊಂದಿದವರು ಸಕ್ರಿಯ ರಾಜಕೀಯದಲ್ಲಿ ಇರಲು ಕಷ್ಟವಾಗುತ್ತಿದೆ.

ಸದನದಲ್ಲಿ ಒಮ್ಮೆ, ರಾಮಕೃಷ್ಣ ಹೆಗಡೆ ಮತ್ತು ಬಂಗಾರಪ್ಪ ಅವರ ಮಧ್ಯೆ ಚರ್ಚೆ ನಡೆತಿತ್ತು. ಕೊನೆಗೆ ಆ ಇಬ್ಬರೂ ಮುಕಂಡರು ಸದನದಲ್ಲಿ ಮೌಲ್ಯವನ್ನು ಕಾಪಾಡೋದು ನಮ್ಮ ಧರ್ಮ ಎಂದು ಹೇಳಿ, ಚರ್ಚೆಯನ್ನು ನಿಲ್ಲಿಸಿದ್ದರು. ಆದರೆ, ಇಂದಿನ ರಾಜಕೀಯ ಪರಿಸ್ಥಿತಿಯೇ ಭಿನ್ನವಾಗಿದೆ ಎಂದರು.

ಈಗಿನ ಶಾಸಕರು, ಸದನದಲ್ಲಿ ಪ್ರಶ್ನೆ ಕೇಳ್ತಾರೆ - ಉತ್ತರ ಹೇಳೋವಾಗ ಅವರೇ ಹಾಜರಿರುವುದಿಲ್ಲ. ಈ ಹಿಂದೆ ಸದನ ಆರಂಭವಾಗಿ ಮುಗಿಯೋವರೆಗೂ ಶಾಸಕರು - ಸಚಿವರು ಸದನದಲ್ಲಿ ಇರುತ್ತಿದ್ದರು. ಇಂದಿನ ಪರಿಸ್ಥಿತಿ ತೀರ ಭಿನ್ನವಾಗಿದೆ. ಶಾಸಕರು - ಸಚಿವರು ಸದನದಲ್ಲಿರಲು ಇಷ್ಟಪಟ್ಟರೂ, ಮತದಾರರು ಚೀಟಿ ಕೊಟ್ಟು ಅವರನ್ನು ಸದನದಿಂದ ಹೊರಗಡೆ ಕರೆಯಿಸಿಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ ಎಂದರು.

ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ವಿಚಾರದ ಕುರಿತು ನೈತಿಕ ಮೌಲ್ಯಗಳ ಸಮಿತಿ ಪರಿಶೀಲನೆ ನಡೆಸುತ್ತಿದೆ. ಸಧ್ಯಕ್ಕೆ ಈ ವಿಚಾರ ಪೆಂಡಿಂಗ್ ಹಂತದಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಎಸ್. ಮಧು ಬಂಗಾರಪ್ಪ, ಮುಖಂಡರಾದ ಅಲ್ಲಂ ಪ್ರಶಾಂತ್, ಡಾ. ಎಸ್.ಜೆ.ವಿ. ಮಹಿಪಾಲ್ ಇನ್ನಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande