ಸಿರುಗುಪ್ಪ, 16 ಜೂನ್ (ಹಿ.ಸ.) :
ಆ್ಯಂಕರ್ : ಆರ್ಸಿಬಿ ಸಂಭ್ರಮೋತ್ಸವದ ಕಾಲ್ತುಳಿತದ ಸಾವುಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಸಿರುಗುಪ್ಪ ಘಟಕ ಸೋಮವಾರ ಪ್ರತಿಭಟನೆ ನಡೆಸಿ, ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
ಸಿರುಗುಪ್ಪ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮುಖಂಡ ಸಿದ್ದಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಆರ್ಸಿಬಿ ಕಾಲ್ತುಳಿತಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ನೇರ ಹೊಣೆ. ಕಾರಣ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದರು.
ಹಿರಿಯರಾದ ಇಬ್ರಾಂಪುರ ವೀರನಗೌಡ, ಮುಖಂಡರಾದ ದರಪ್ಪನಾಯಕ, ನಗರಸಭೆ ಸದಸ್ಯರಾದ ಮೇಕೆಲ್ ವೀರೇಶ್, ಮೋಹನ್ ರೆಡ್ಡಿ, ಮಹಾದೇವ, ವಿಕ್ರಂಜೈನ್, ಸುಂಕಪ್ಪ, ಚಿರಂಜೀವಿ, ಹೆಚ್. ಶೇಖಪ್ಪ, ಶಂಕ್ರಪ್ಪ, ಈರಣ್ಣ ,ಬಸವರಾಜ, ಕೃಷ್ಣ, ಖಾಜಾ ಸಾಬ್, ಶೇಕ್ಷಾವಲಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್