ಬಳ್ಳಾರಿ, 16 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರಾದ್ಯಂತರ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ಜಿಲ್ಲಾ ಪೊಲೀಸ್ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ಬದಲು ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಕನ್ನಡನಾಡು ರೈತ ಸಂಘದ ರಾಜ್ಯಾಧ್ಯಕ್ಷ ಮೆಣಸಿನ ಈಶ್ವರಪ್ಪ ಅವರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದ ಅವರು, ಬಳ್ಳಾರಿ ನಗರದಲ್ಲಿ ಸದಾಕಾಲ ಹೆಚ್ಚಿನ ಉಷ್ಣಾಂಶದ ಜೊಎಯಲ್ಲಿ ಬೃಹತ್ ಕೈಗಾರಿಕೆಗಳ ಉಷ್ಣಾಂಶವು ದಿನೇ ದಿನೇ ಹೆಚ್ಚುತ್ತಿರುವ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಸುತ್ತಿಲ್ಲ. ಜಿಲ್ಲಾ ಪೊಲೀಸ್ ಸಾರ್ವಜನಿಕರು ಹೆಲ್ಮೆಟ್ ಕಡ್ಡಾಯ ಎಂದು ಹೇಳುವ ಬದಲು, ರಸ್ತೆಗಳು ದುರಸ್ತಿಯಾದಲ್ಲಿ ಸಾಕಷ್ಟು ಅಪಘಾತಗಳು - ಅವಘಡಗಳು ತಪ್ಪಲಿವೆ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಕನ್ನಡನಾಡು ರೈತ ಸಂಘದ ಪದಾಧಿಕಾರಿಗಳು ಕೆ. ರಾಜಶೇಖರಗೌಡ, ಎಸ್. ರುದ್ರಯ್ಯಸ್ವಾಮಿ, ಎನ್. ವಿಶ್ವನಾಥ ಗೌಡ, ಆರ್. ಪ್ರದೀಪ್, ಆರ್. ಮಂಜುನಾಥ, ಟಿ.ಹೆಚ್.ಎಂ ಪ್ರಹ್ಲಾದ್, ಪ್ರಸಾದ್, ಎಚ್. ಶ್ರೀನಿವಾಸರೆಡ್ಡಿ, ಗೋವಿಂದಪ್ಪ, ಬಿ. ನಾಗರಾಜ್ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್