ಕಲಬುರಗಿ, 16 ಜೂನ್ (ಹಿ.ಸ.) :
ಆ್ಯಂಕರ್ :
ಮುಂಗಾರು ಮಳೆ ಹಿನ್ನಲೆಯಲ್ಲಿ ಬಿತ್ತನೆ ಆರಂಭವಾದರೂ ಸಹ ಸಮರ್ಪಕವಾಗಿ ರಸಗೊಬ್ಬರ, ಬೀಜ ಪೂರೈಕೆ ಆಗ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಚಿಂಚೋಳಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ ಜಿಲ್ಲೆಗೆ ಸರಿಸುಮಾರು 13 ಸಾವಿರ ಕ್ವಿಂಟಾಲ್ನಿಂದ 14 ಸಾವಿರ ಕ್ವಿಂಟಾಲ್ ವರೆಗೆ ಇದ್ದು, ಆದರೆ ಕೇಂದ್ರ ಸರ್ಕಾರ ಇಲ್ಲಿವರೆಗೆ ಕೇವಲ 6 ಸಾವಿರ ಕ್ವಿಂಟಾಲ್ ಮಾತ್ರ ಸೋಯಾ ಬೀಜ ನೀಡಿದ್ದು, ಎಲ್ಲಾ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪುರೈಕೆ ಮಾಡಬೇಕೆಂದು ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Samarth biral