ಶಿವಮೊಗ್ಗ, 15 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮವು 2025–26ನೇ ಸಾಲಿನ ಪಂಚವೃತ್ತಿ ಅಭಿವೃದ್ದಿ, ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ (ಹೊಸ ಹಾಗೂ ನವೀಕರಣ), ಗಂಗಾ ಕಲ್ಯಾಣ, ವಿದೇಶಿ ವ್ಯಾಸಂಗ ಸೇರಿದಂತೆ ನಾನಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಜುಲೈ 2 ರೊಳಗಾಗಿ ಅರ್ಜಿ ಆಹ್ವಾನಿಸಿದೆ.
ಅರ್ಹತಾ ಮಾನದಂಡಗಳಂತೆ ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿದ್ದು, ವಿಶ್ವಕರ್ಮ ಸಮುದಾಯದವರು ಆಗಿರಬೇಕು. ವಯೋಮಿತಿ ಸಾಮಾನ್ಯವಾಗಿ 18-55 ವರ್ಷಗಳ ಮಧ್ಯೆ ಇದ್ದು, ಕೆಲವು ಯೋಜನೆಗಳಿಗೆ ಪ್ರತ್ಯೇಕ ಮಿತಿಗಳು ನಿಗದಿಯಾಗಿವೆ. ಅರ್ಜಿ ಸಲ್ಲಿಸಲು ಆಧಾರ್, ಜಾತಿ-ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ವಿವರಗಳು ಕಡ್ಡಾಯ. ಅರ್ಜಿ ಸೇವಾಸಿಂಧು ಪೋರ್ಟಲ್ (www.kaushalkar.com) ಮುಖಾಂತರ ಕರ್ನಾಟಕ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಅಥವಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ನಿಗಮದ ವೆಬ್ಸೈಟ್ https://kvcdcl.karnataka.gov.in ಅಥವಾ ದೂರವಾಣಿ: 08182-229634 ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa