ವಿಶ್ವಕರ್ಮ ನಿಗಮದಿಂದ ಸಾಲ ಹಾಗೂ ಸಹಾಯಧನಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ, 15 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮವು 2025–26ನೇ ಸಾಲಿನ ಪಂಚವೃತ್ತಿ ಅಭಿವೃದ್ದಿ, ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ (ಹೊಸ ಹಾಗೂ ನವೀಕರಣ), ಗಂಗಾ ಕಲ್ಯಾಣ, ವಿದೇಶಿ ವ್ಯಾಸಂಗ ಸೇರಿದಂತೆ ನಾನಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ
ವಿಶ್ವಕರ್ಮ ನಿಗಮದಿಂದ ಸಾಲ ಹಾಗೂ ಸಹಾಯಧನಕ್ಕೆ ಅರ್ಜಿ ಆಹ್ವಾನ


ಶಿವಮೊಗ್ಗ, 15 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮವು 2025–26ನೇ ಸಾಲಿನ ಪಂಚವೃತ್ತಿ ಅಭಿವೃದ್ದಿ, ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ (ಹೊಸ ಹಾಗೂ ನವೀಕರಣ), ಗಂಗಾ ಕಲ್ಯಾಣ, ವಿದೇಶಿ ವ್ಯಾಸಂಗ ಸೇರಿದಂತೆ ನಾನಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಜುಲೈ 2 ರೊಳಗಾಗಿ ಅರ್ಜಿ ಆಹ್ವಾನಿಸಿದೆ.

ಅರ್ಹತಾ ಮಾನದಂಡಗಳಂತೆ ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿದ್ದು, ವಿಶ್ವಕರ್ಮ ಸಮುದಾಯದವರು ಆಗಿರಬೇಕು. ವಯೋಮಿತಿ ಸಾಮಾನ್ಯವಾಗಿ 18-55 ವರ್ಷಗಳ ಮಧ್ಯೆ ಇದ್ದು, ಕೆಲವು ಯೋಜನೆಗಳಿಗೆ ಪ್ರತ್ಯೇಕ ಮಿತಿಗಳು ನಿಗದಿಯಾಗಿವೆ. ಅರ್ಜಿ ಸಲ್ಲಿಸಲು ಆಧಾರ್, ಜಾತಿ-ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ವಿವರಗಳು ಕಡ್ಡಾಯ. ಅರ್ಜಿ ಸೇವಾಸಿಂಧು ಪೋರ್ಟಲ್ (www.kaushalkar.com) ಮುಖಾಂತರ ಕರ್ನಾಟಕ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಅಥವಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ https://kvcdcl.karnataka.gov.in ಅಥವಾ ದೂರವಾಣಿ: 08182-229634 ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande