ವಿ.ಎಸ್‌.ಕೆ ವಿವಿಯ ಫಲಿತಾಂಶ ಪ್ರಕಟ : ಎಸ್‌ಕೆಎನ್‌ಜಿ ಕಾಲೇಜಿಗೆ 7 ರ‍್ಯಾಂಕ್
ಗಂಗಾವತಿ, 15 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24ನೇ ಫಲಿತಾಂಶ ಪ್ರಕಟ ಗೊಂಡಿದ್ದು, ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಡಿಗೆ 7 ರ‍್ಯಾಂಕ್‌ಗಳು ಲಭಿಸಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ
ವಿ.ಎಸ್‌.ಕೆ ವಿವಿಯ ಫಲಿತಾಂಶ ಪ್ರಕಟ: ಎಸ್‌ಕೆಎನ್‌ಜಿ ಕಾಲೇಜಿಗೆ 7 ರ‍್ಯಾಂಕ್*


ವಿ.ಎಸ್‌.ಕೆ ವಿವಿಯ ಫಲಿತಾಂಶ ಪ್ರಕಟ: ಎಸ್‌ಕೆಎನ್‌ಜಿ ಕಾಲೇಜಿಗೆ 7 ರ‍್ಯಾಂಕ್*


ವಿ.ಎಸ್‌.ಕೆ ವಿವಿಯ ಫಲಿತಾಂಶ ಪ್ರಕಟ: ಎಸ್‌ಕೆಎನ್‌ಜಿ ಕಾಲೇಜಿಗೆ 7 ರ‍್ಯಾಂಕ್*


ವಿ.ಎಸ್‌.ಕೆ ವಿವಿಯ ಫಲಿತಾಂಶ ಪ್ರಕಟ: ಎಸ್‌ಕೆಎನ್‌ಜಿ ಕಾಲೇಜಿಗೆ 7 ರ‍್ಯಾಂಕ್*


ಗಂಗಾವತಿ, 15 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24ನೇ ಫಲಿತಾಂಶ ಪ್ರಕಟ ಗೊಂಡಿದ್ದು, ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಡಿಗೆ 7 ರ‍್ಯಾಂಕ್‌ಗಳು ಲಭಿಸಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮುಮ್ತಾಜ್ ಬೇಗಂ ಅವರು ಹರುಷ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಒಬ್ಬರು, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗಗಳಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 7 ಜನ ವಿದ್ಯಾರ್ಥಿ ಗಳು ಟಾಪ್ ನಾಲ್ಕರಲ್ಲಿ ರ‍್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ವಾಸಂತಿ ಎ(ಶೇ.76.08) ಮೂರನೇ ರ‍್ಯಾಂಕ್, ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಬಾಲಪ್ಪ ಚಳ್ಳೂರು(ಶೇ.76.75) ಎರಡನೇ ರ‍್ಯಾಂಕ್, ವಿಜಯಲಕ್ಷ್ಮಿ(ಶೇ.75.46) ನಾಲ್ಕನೇ ರ‍್ಯಾಂಕ್, ಸಮಾಜಶಾಸ್ತ್ರ ವಿಭಾಗದಲ್ಲಿ ವೀರೇಶ್(ಶೇ.78.04) ಎರಡನೇ ರ‍್ಯಾಂಕ್, ಮಂಜುಳಾ(ಶೇ.76.83) ಮೂರನೇ ರ‍್ಯಾಂಕ್ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹೇಮಂತ್ ಕುಮಾರ್ ಸಾವಂತ್(ಶೇ.73.54) ಎರಡನೇ ರ‍್ಯಾಂಕ್, ಯಮನೂರಪ್ಪ(ಶೇ.72.5) ಮೂರನೇ ರ‍್ಯಾಂಕ್ ಗಳಿಸಿದ್ದಾರೆ.

ಉನ್ನತ ವ್ಯಾಸಂಗದಲ್ಲಿ ಉತ್ತಮ ಫಲಿತಾಂಶದ ಶೈಕ್ಷಣಿಕ ಏಳಿಗೆ ಜೊತೆಗೆ ಕಾಲೇಜಿನ ಕೀರ್ತಿಗೆ ಭಾಜನರಾದ ವಿದ್ಯಾರ್ಥಿಗಳಿಗೆ ಹಾಗೂ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರ ಬಳಗಕ್ಕೆ ಇತಿಹಾಸ ಮತ್ತು ಪುರಾತತ್ವ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರಾದ ಮುಮ್ತಾಜ್ ಬೇಗಂ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಜೊತೆಗೆ ಕಾಲೇಜಿನ ಪ್ರಾಧ್ಯಾಪಕರ ಬಳಗದ ಶಿವರಾಜ ಎಸ್. ಗುರಿಕಾರ, ಅಣ್ಣೋಜಿ ರೆಡ್ಡಿ ಆರ್., ಅನಿಲ್ ಕುಮಾರ್ ಎಡ್ವರ್ಡ್, ಬಾರಿಕರ ಫಣಿರಾಜ್, ಮಂಜುನಾಥ ಕೆ.ಎಚ್., ರವಿಕುಮಾರ್, ಅಶ್ರಫ್ ಅಲ್ಲಾಳಿ, ಅಕ್ಕಿ ಮಾರುತಿ, ಮೆಹ್ತಾಬ್ ಅಂಜುಮ್, ಅನಿತಾ ಕೆ.ಎಂ., ರವಿ ಕೆ.ಎನ್., ಎಟುಕೋರಿ ದೊರಬಾಬು, ಮಲ್ಲಿಕಾರ್ಜುನ್, ಸಲೀಂ, ಎ.ಭೂಮಿಕಾ ಹಾಗೂ ಸುಮಲತಾ ಸೇರಿದಂತೆ ಉಪನ್ಯಾಸಕರ ಬಳಗ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹರುಷ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande