ಬೆಂಗಳೂರು, 15 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಜಯನಗರದ ಜೆಎಸ್ ಎಸ್ ಸಭಾಂಗಣದಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆಯ ಪ್ರಯುಕ್ತ 'ನಿಜನಾಯಕ ಅಪ್ಪ' ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಎಲ್ಲ ತಂದೆಯರ ಗೌರವಾರ್ಥ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಡಾ.ವಿ ನಾಗೇಂದ್ರಪ್ರಸಾದ್ ಸಾಹಿತ್ಯ, ಸಂಗೀತ ನೀಡಿದ, ರಾಜೇಶ್ ಕೃಷ್ಣನ್ ಗಾಯನದಲ್ಲಿ 'ನಿಜ ನಾಯಕ ಅಪ್ಪ' ಕನ್ನಡ ಭಾವಗೀತೆಯನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ ಲೋಕಾರ್ಪಣೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa