ಕಾಲ್ತುಳಿತ ಪ್ರಕರಣ : ವಿಜಯೇಂದ್ರ ಬಾಲಿಶತನದ ಹೇಳಿಕೆ : ಸಚಿವ ಮಹಾದೇವಪ್ಪ
ಕಲಬುರಗಿ, 15 ಜೂನ್ (ಹಿ.ಸ.) ಆ್ಯಂಕರ್ : ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವನೆ ಸದ್ಯ ಸರಕಾರದ ಮುಂದೆ ಇಲ್ಲ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಇದ್ದಾರೆ. ಅವರೇ ಮುಂದುವರೆಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿ
ಕಾಲ್ತುಳಿತ ಪ್ರಕರಣ: ವಿಜಯೇಂದ್ರ ಅವರದ್ದು  ಬಾಲಿಷತನದ ಹೇಳಿಕೆ: ಸಚಿವ ಮಹಾದೇವಪ್ಪ


ಕಲಬುರಗಿ, 15 ಜೂನ್ (ಹಿ.ಸ.)

ಆ್ಯಂಕರ್ : ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವನೆ ಸದ್ಯ ಸರಕಾರದ ಮುಂದೆ ಇಲ್ಲ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಇದ್ದಾರೆ. ಅವರೇ ಮುಂದುವರೆಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಹೇಳಿದ್ದಾರೆ.

ಕಲಬುರಗಿ ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ನಂತರ ಮುಖ್ಯಮಂತ್ರಿ ಬದಲಾವಣೆ ಎನ್ನುವ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಅವರಿಗೆ ಹೈಕಮಾಂಡ್ ಯಾವಾಗ ಆ ರೀತಿ ಹೇಳಿದ್ರೋ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ಇಲ್ಲ ಎಂದರು.

ಇನ್ನು ಇದೆ ವೇಳೆ ಮಾತನಾಡಿದ ಅವರು, ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನೇರ ಹೊಣೆ ಎನ್ನುವ ವಿಜಯೇಂದ್ರ ಹೇಳಿಕೆಯ್ನ ತೀವ್ರವಾಗಿ ಖಂಡಿಸಿದರು. ಅದು ತುಂಬಾ ಬಾಲಿಷತನದ ಹೇಳಿಕೆ, ಆ ದುರಂತದಿಂದ ತುಂಬಾ ನೋವಾಗಿದೆ.‌ ದುರಂತ ಆಗಬಾರದಿತ್ತು, ಆಗಿದೆ..‌ ಅದಕ್ಕೆ ವಿಷಾದ ಇದೆ.‌ ಅದರಲ್ಲಿನ ಲೋಪ ಕಂಡು ಹಿಡಿಯಲು ಕಮೀಷನ್ ನೇಮಕ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮುಗಿಯಬೇಕಾಗಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಮೂರ್ಖತನ.‌ ಈ ಥರ ಘಟನೆ ಯುಪಿ ಸೇರಿ ಬೇರೆ ಬೇರೆ ಕಡೆ ಸಹ ನಡೆದಿವೆ. ಗುಜರಾತನಲ್ಲಿ ವಿಮಾನ ದುರಂತ ಆಯ್ತು. ನಾವು ಪ್ರಧಾನಿ ರಾಜೀನಾಮೆ ಕೇಳಿದ್ದಿವಾ.? ಇಂತದ್ದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande