ಹಿರಿಯರಿಗೆ ಸಂಧ್ಯಾ ಕಾಲದಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಕರೆ
ಹಿರಿಯರಿಗೆ ಸಂಧ್ಯಾ ಕಾಲದಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಕರೆ
ಕೋಲಾರದ ನಗರದ ಅಂತರಗAಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ `ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ' ಕಾರ್ಯಕ್ರಮಕ್ಕೆ ಹಿರಿಯ ನ್ಯಾಯಾಧೀಶರಾದ ಆರ್.ನಟೇಶ್ ಚಾಲನೆ ನೀಡಿದರು.


ಕೋಲಾರ, ೧೫ ಜೂನ್ (ಹಿ.ಸ) :

ಆ್ಯಂಕರ್ : ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಮೂಲಕ ಹೆಚ್ಚುತ್ತಿರುವ ವೃದ್ದಾಶ್ರಮ ಸಂಸ್ಕೃತಿಗೆ ಕಡಿವಾಣ ಹಾಕಬೇಕು. ಸಂಧ್ಯಾಕಾಲದಲ್ಲಿ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಆರ್.ನಟೇಶ್ ಕರೆ ನೀಡಿದರು.

ನಗರದ ಅಂತರಗAಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ`ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಂದ ವಂಚನೆ,ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರೀಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ೧೫೧೦೦ ಬಳಸಿಕೊಂಡು ದೂರು ನೀಡುವಂತೆ ಸಲಹೆ ನೀಡಿದ ಅವರು, ನಿಮ್ಮ ಹಕ್ಕುಗಳನ್ನು ಪಡೆದಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹಿರಿಯ ನಾಗರೀಕರ ದೌರ್ಜನ್ಯ ತಡೆ ಕಾಯಿದೆಯ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.

ಮನೆಯಲ್ಲಿ ವೃದ್ದರು ಎಂದಿಗೂ ಹೊರೆಯಲ್ಲ. ಅವರು ಕುಟುಂಬದ ಕಿರಿಯರಿಗೆ ಮಾರ್ಗದರ್ಶನ ನೀಡುವ ಸಂಪನ್ಮೂಲ ವ್ಯಕ್ತಿಗಳು ಎಂಬುದನ್ನು ಅರಿಯಬೇಕು. ಮಕ್ಕಳಾಗಿದ್ದಾಗ ಅವರು ಮಾಡಿರುವ ಸೇವೆ, ಪೋಷಣೆ ಮರೆಯಬಾರದು. ಯೌವ್ವನದ ಬಿಸಿಯಲ್ಲಿ ಹಿರಿಯರ ಕಡೆಗಣನೆ ಸರಿಯಲ್ಲ ಎಂದರು.

ಅವರ ರಕ್ಷಣೆಗೆ ಈಗ ಕಾನೂನು ಇದೆ ಎಂಬುದನ್ನು ಅರಿಯಿರಿ ಎಂದು ಯುವಕರಿಗೆ ಕಿವಿಮಾತು ಹೇಳಿದರು. ಹಿರಿಯರ ಅನುಭವ ನಿಮಗೆ ದಾರಿದೀಪವಾಗುತ್ತದೆ. ಅವರು ಹೊರೆಯೆಂದು ಭಾವಿಸಿ ವೃದ್ದಾಶ್ರಮಗಳಿಗೆ ಸೇರಿಸಿ ಮನೆಯಲ್ಲಿ ಮಕ್ಕಳಿಗೆ ತಾತ,ಅಜ್ಜಿಯ ಪ್ರೀತಿ ಇಲ್ಲವಾಗಿಸಬೇಡಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ್ ಹಂಸ ಮರಿಯಾ ಮಾತನಾಡಿ ಹಿರಿಯ ನಾಗರೀಕರಿಗೆ ಸರ್ಕಾರ ತಮ್ಮ ಸಂಧ್ಯಾಕಾಲದಲ್ಲಿ ಹಲವಾರು ಸೌಲಭ್ಯಗಳನ್ನು ನೀಡಿದೆ, ವೃದ್ದಾಪ್ಯವೇತನ, ಸಂಧ್ಯಾ ಸುರಕ್ಷ ವೇತನ, ಉಚಿತ ಆರೋಗ್ಯ ಸೇವೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಸAಪನ್ಮೂಲ ವ್ಯಕ್ತಿ ಹಾಗೂ ವಕೀಲ ಗೋಪಾಲರೆಡ್ಡಿ ಹಿರಿಯ ನಾಗರೀಕರ ರಕ್ಷಣಾ ಕಾಯಿದೆ-೨೦೦೭ರ ಕುರಿತು ಮಾರ್ಗದರ್ಶನ ನೀಡಿ, ಸರ್ಕಾರ ನಿಮ್ಮ ರಕ್ಷಣೆಗಾಗಿಯೇ ಜಾರಿಗೆ ತಂದಿರುವ ಈ ಕಾಯಿದೆಯ ಸದುಪಯೋಗ ಪಡೆಯಿರಿ. ಹಿರಿಯ ನಾಗರೀಕರ ರಕ್ಷಣೆ, ಆರೈಕೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಕ್ಕಳ ವಿರುದ್ದ ಕ್ರಮಕ್ಕೆ ಈ ಕಾಯಿದೆ ಅನುವು ಮಾಡಿಕೊಡುತ್ತದೆ. ನೀವು ನೆಮ್ಮದಿಯಿಂದ ಜೀವನ ನಡೆಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಈ ಕಾಯಿದೆಯ ಉದ್ದೇಶವಾಗಿದ್ದು, ಇದರ ಉಪಯೋಗ ಪಡೆಯಿರಿ ನಿಮ್ಮ ಹಕ್ಕು ನಿಮ್ಮದಾಗಿಸಿಕೊಳ್ಳಿ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಂಜುಳಾ ಮಾತನಾಡಿ ಹಿರಿಯ ನಾಗರೀಕರ ಹಾಗೂ ಅಂಗವಿಕಲ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ವಿಕಲಚೇತನರಿಗೆ ವಿಶೇಷ ಸೌಲಭ್ಯಗಳಿವೆ, ಸಲಕರಣೆಗಳ ನೆರವೂ ಸಿಗಲಿದೆ ಎಂದು ತಿಳಿಸಿದರು.

ಹಿರಿಯ ನಾಗರೀಕರ ಪರವಾಗಿ ನಿವೃತ್ತ ಶಿಕ್ಷಕ ಟಿ.ಎಂ.ರಾಮಕೃಷ್ಣೇಗೌಡ, ಹಿರಿಯ ನಾಗರೀಕರು ಕುಟುಂಬ ಹಾಗೂ ಸಮಾಜದ ನಿರ್ಲಕ್ಷ್ಯದಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ. ಎಷ್ಟೊ ಮಂದಿಗೆ ಈ ದೌರ್ಜನ್ಯ ತಡೆ ಕಾಯಿದೆ ಇದೆ ಎಂಬ ಅರಿವು ಇಲ್ಲ. ನಿರಂತರವಾಗಿ ಶಿಕ್ಷೆ ನೋವು ಅನುಭವಿಸುತ್ತಲೇ ಇದ್ದಾರೆ ಎಂದು ತಿಳಿಸಿದರು.

ಅಂತರಗ0ಗಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಶಂಕರ್ ಮಾತನಾಡಿ ವಿಕಲಚೇತನರು, ಅನಾಥರಿಗೆ ಸಂಸ್ಥೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಕುರಿತು ತಿಳಿಸಿ, ಸರ್ಕಾರದದಿಂದ ಮತ್ತಷ್ಟು ಸೌಲಭ್ಯಗಳು ಹರಿದು ಬರಬೇಕು, ಮಕ್ಕಳು ಸ್ಥಿತಿವಂತರಾದವರೂ ಸಹ ಇಂದು ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿರುವುದು ನೋವಿನ ಸಂಗತಿ ಎಂದರು.

ಚಿತ್ರ : ಕೋಲಾರದ ನಗರದ ಅಂತರಗ0ಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ `ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ' ಕಾರ್ಯಕ್ರಮಕ್ಕೆ ಹಿರಿಯ ನ್ಯಾಯಾಧೀಶರಾದ ಆರ್.ನಟೇಶ್ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande