ಮಠಗಳ ವಿವಾದ : ಶ್ರೀ ಸುಬುಧೇಂದ್ರ, ಶ್ರೀ ಸತ್ಯಾತ್ಮ ತೀರ್ಥರ ಭೇಟಿ, ಮಾತುಕತೆ
ರಾಯಚೂರು, 13 ಜೂನ್ (ಹಿ.ಸ.) : ಆ್ಯಂಕರ್ : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೂ, ಉತ್ತರದಿಮಠಕ್ಕೂ ಇರುವ ನವಬೃಂದಾವನ ಇತ್ಯಾದಿ ನ್ಯಾಯಾಲಯದ ವಿವಾದವನ್ನು ಉಭಯ ಮಠದವರು ಸಾಮರಸ್ಯದಿಂದ ಚರ್ಚೆ ಮಾಡಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ಮೇರೆಗೆ ಇಂದು ಚೆನ್ನೈ ನಲ್ಲಿ
ಮಠಗಳ  ವಿವಾದ : ಶ್ರೀ ಸುಬುಧೇಂದ್ರ, ಶ್ರೀ ಸತ್ಯಾತ್ಮ ತೀರ್ಥರ ಭೇಟಿ, ಮಾತುಕತೆ


ಮಠಗಳ  ವಿವಾದ : ಶ್ರೀ ಸುಬುಧೇಂದ್ರ, ಶ್ರೀ ಸತ್ಯಾತ್ಮ ತೀರ್ಥರ ಭೇಟಿ, ಮಾತುಕತೆ


ಮಠಗಳ  ವಿವಾದ : ಶ್ರೀ ಸುಬುಧೇಂದ್ರ, ಶ್ರೀ ಸತ್ಯಾತ್ಮ ತೀರ್ಥರ ಭೇಟಿ, ಮಾತುಕತೆ


ಮಠಗಳ  ವಿವಾದ : ಶ್ರೀ ಸುಬುಧೇಂದ್ರ, ಶ್ರೀ ಸತ್ಯಾತ್ಮ ತೀರ್ಥರ ಭೇಟಿ, ಮಾತುಕತೆ


ರಾಯಚೂರು, 13 ಜೂನ್ (ಹಿ.ಸ.) :

ಆ್ಯಂಕರ್ : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೂ, ಉತ್ತರದಿಮಠಕ್ಕೂ ಇರುವ ನವಬೃಂದಾವನ ಇತ್ಯಾದಿ ನ್ಯಾಯಾಲಯದ ವಿವಾದವನ್ನು ಉಭಯ ಮಠದವರು ಸಾಮರಸ್ಯದಿಂದ ಚರ್ಚೆ ಮಾಡಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ಮೇರೆಗೆ ಇಂದು ಚೆನ್ನೈ ನಲ್ಲಿ ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಉಭಯ ಮಠಗಳ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಸತ್ಯಾತ್ಮ ತೀರ್ಥರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಂತರ ಮಾತನಾಡಿರುವ ಉಭಯ ಶ್ರೀಗಳು,ಮಠಗಳ ಭಕ್ತರ ಶ್ರೇಯೋಭಿವೃದ್ಧಿಗಾಗಿ ನಾವು ಂಶ್ರಮಿಸುತ್ತಿದ್ದೇವೆ. ಸಮಾಜದ ಹಿತಕ್ಕಾಗಿ, ಒಳ್ಳೆ ರೀತಿಯಲ್ಲಿ ವಿವಾದಗಳು ಆದಷ್ಟು ಬೇಗ ಪರಿಹರವಾಗಲಿ ಎಂದರು.

ವಿವಾದ ಹಿನ್ನಲೆ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ತುಂಗಭದ್ರಾ ನದಿ ನಡುಗಡೆಯಲ್ಲಿರುವ ನವವೃಂದಾವನದ ಯತಿಗಳ ಬೃಂದಾವನ ಪೂಜೆ ವಿಚಾರದಲ್ಲಿ ಎರಡು ಮಠಗಳ ನಡುವೆ ಸಾಕಷ್ಟು ವಿವಾದ ಉಂಟಾಗಿತ್ತು. ಯತಿಗಳ ಆರಾಧನೆ ವೇಳೆ ನವ ವೃಂದಾವನ ಗಡ್ಡೆಯಲ್ಲಿ ಬಹಳ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಯತಿಗಳ ಪೂಜೆಗೆ ನಮಗೆ ಅವಕಾಶ ನೀಡಬೇಕು ಎನ್ನುವುದು ಉಭಯ ಮಠಗಳ ಬೇಡಿಕೆ ಹಿನ್ನಲೆಯಲ್ಲಿ ವಿವಾದಗಳು ನಡೆಯುತ್ತಿದ್ದವು.

ಈ ವಿವಾದ ಇತ್ಯರ್ಥಕ್ಕೆ ಉಭಯ ಮಠಗಳು ನ್ಯಾಯಾಲಯ ಮೆಟ್ಟಿಲು ಏರಿದ್ದವು. ಸ್ಥಳೀಯ ನ್ಯಾಯಲಯಗಳು ಎರಡೂ ಮಠಕ್ಕೂ ಒಂದೂವರೆ ದಿನದ ಆಧಾರದಲ್ಲಿ ಪೂಜೆಗೆ ಅವಕಾಶ ನೀಡಿದ್ದರೂ ವಿವಾದ ಕೊನೆಗೊಂಡಿರಲಿಲ್ಲ. ಈಗ ಮಾತುಕತೆಯಿಂದ ಸಮಸ್ಯೆ ಬಗೆ ಹರಿಸಿಕೊಳ್ಳಲು ಸುಪ್ರಿಂ ಕೋರ್ಟ್ ಸೂಚನೆ ನೀಡಿದ್ದು ಉಭಯ ಶ್ರೀಗಳು ಭೇಟಿ ಮಾಡಿ ಮತು ಕಥೆ ನಡೆಸಿದ್ದಾರೆ. ಮಠದ ಭಕ್ತರಲ್ಲಿ ಶ್ರೀಗಳ ಭೇಟಿ ಆನಂದ ತಂದಿದೆ. ಸಮಸ್ಸೆ ಬಗೆಹರಿಯುವ ಆಸೆ ಮೂಡಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande