ನಾಳೆ ಕಲಬುರಗಿಯಲ್ಲಿ ವಿಜಯ ಸೌಹಾರ್ದ ಸಂಘದ ಶಾಖೆ ಉದ್ಘಾಟನೆ
ಕಲಬುರಗಿ, 14 ಜೂನ್ (ಹಿ.ಸ.) ಆ್ಯಂಕರ್ : ವಿಜಯ ಎಮ್.ಆರ್.ಎನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಮುಧೋಳದ 67ನೇ ಶಾಖೆಯನ್ನು ಕಲಬುರಗಿಯಲ್ಲಿ ಉದ್ಘಾಟನಾ ಮಾಡಲಾಗುತ್ತಿದೆ ಎಂದು ವಿಜಯ ಎಮ್.ಆರ್.ಎನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರ
ಜೂ.15ರಂದು ಕಲಬುರಗಿಯಲ್ಲಿ ವಿಜಯ ಸೌಹಾರ್ದ ಸಂಘದ ಶಾಖೆ ಉದ್ಘಾಟನೆ: ನಿರಣಿ


ಕಲಬುರಗಿ, 14 ಜೂನ್ (ಹಿ.ಸ.)

ಆ್ಯಂಕರ್ : ವಿಜಯ ಎಮ್.ಆರ್.ಎನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಮುಧೋಳದ 67ನೇ ಶಾಖೆಯನ್ನು ಕಲಬುರಗಿಯಲ್ಲಿ ಉದ್ಘಾಟನಾ ಮಾಡಲಾಗುತ್ತಿದೆ ಎಂದು ವಿಜಯ ಎಮ್.ಆರ್.ಎನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು.

ಕಲಬುರಗಿಯ ಐವಾನ ಶಾಹಿ ಅತಿಥಿ ಗೃಹದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ, ನಾಳೆ 10-30ಕ್ಕೆ ಶ್ವೇತಾ ಡೆಂಟಲ್ ಹಾಸ್ಪಿಟಲ್ ಬಳಿ ಶಾಖೆ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭವು ನಗರದ ವೆಂಕಟೇಶ ಯರಗೋಳ ಮಂಗಲ ಕಾರ್ಯಾಲಯದಲ್ಲಿ ಜರುಗಲಿದೆ.

ಅಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದ್ರಾಕ್ಷಾಯಿಣಿ ಎಸ್ ಅಪ್ಪ ಅವರು ವಹಿಸಿಕೊಳ್ಳಲಿದ್ದಾರೆ.

ಸಮಾರಂಭವನ್ನು ಎಮ್ ಎಲ್ ಸಿ ಶಶೀಲ್ ನಮೋಶಿ ವಹಿಸಿಕೊಳ್ಳಲಿದ್ದು, ಸಚಿವ ಶರಣಪ್ರಕಾಶ ಪಾಟೀಲ್, ಶಾಸಕರಾದ ಅಲ್ಲಮರ ಪಾಟೀಲ್, ಅವಿನಾಶ ಜಾಧವ್, ಬಿಜಿ ಪಾಟೀಲ್, ಎಮ್ ವೈ ಪಾಟೀಲ್ ಬಸವರಾಜ್ ಮತ್ತಿಮೂಡ್, ಸುನೀಲ್ ವಲ್ಲಾಪುರೇ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ಎಮ್ ಎಲ್ ಸಿ ಅಮರನಾಥ ಪಾಟೀಲ್, ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande