ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್‌ ಓಲೈಸಲು ವಿಶೇಷ ಕಾರ್ಯಪಡೆ : ಬಿಜೆಪಿ
ಬೆಂಗಳೂರು, 14 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕದ ಕರಾವಳಿ ಭಾಗದಲ್ಲಿ ನಡೆದ ಸರಣಿ ಹತ್ಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ವಿಶೇಷ ಕಾರ್ಯಪಡೆ ಸ್ಥಾಪಿಸಿದೆ. ಈ ಕೋಮು ನಿಗ್ರಹ ಪಡೆಯ ಸ್ಥಾಪನೆಯ ಹಿಂದೆ ಕಾಂಗ್ರೆಸ್ ಪಕ್ಷದ ನಿಶ್ಚಿತ ಮತ ಬ್ಯಾಂಕ್‌ ಆಗಿರುವ ಮುಸಲ್ಮಾನರನ್ನು ಓಲೈಸುವ ಷಡ್
ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್‌ ಓಲೈಸಲು ವಿಶೇಷ ಕಾರ್ಯಪಡೆ : ಬಿಜೆಪಿ


ಬೆಂಗಳೂರು, 14 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ ಕರಾವಳಿ ಭಾಗದಲ್ಲಿ ನಡೆದ ಸರಣಿ ಹತ್ಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ವಿಶೇಷ ಕಾರ್ಯಪಡೆ ಸ್ಥಾಪಿಸಿದೆ. ಈ ಕೋಮು ನಿಗ್ರಹ ಪಡೆಯ ಸ್ಥಾಪನೆಯ ಹಿಂದೆ ಕಾಂಗ್ರೆಸ್ ಪಕ್ಷದ ನಿಶ್ಚಿತ ಮತ ಬ್ಯಾಂಕ್‌ ಆಗಿರುವ ಮುಸಲ್ಮಾನರನ್ನು ಓಲೈಸುವ ಷಡ್ಯಂತ್ರವಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ಕೊಳತ್ತಮಜಲು ರೆಹಮಾನ್‌ ಹತ್ಯೆಯ ಬೆನ್ನಿಗೆ ಮುಸ್ಲಿಮ್‌ ಧಾರ್ಮಿಕ ಗುರುಗಳು, ಮುಸ್ಲಿಮ್‌ ಮುಖಂಡರು, ಮುಸ್ಲಿಮ್‌ ರಾಜಕೀಯ ನೇತಾರರು ಕಾಂಗ್ರೆಸ್‌ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಸಿದ್ದರಾಮಯ್ಯ ಸರ್ಕಾರ ಕೋಮು ನಿಗ್ರಹ ಪಡೆ ಸ್ಥಾಪಿಸಿದೆ.

ಈಗಾಗಲೇ ಮುಸ್ಲಿಮ್‌ ಸಮುದಾಯದ ಆಕ್ರೋಶಕ್ಕೆ ಮಣಿದಿರುವ ಸರ್ಕಾರ ಹಿಂದೂ ನಾಯಕರಿಗೆ, ಬಿಜೆಪಿ ಮುಖಂಡರಿಗೆ ಗಡಿಪಾರು ನೊಟೀಸ್‌ ನೀಡಿದೆ. ರಾತ್ರೋರಾತ್ರಿ ಆರ್‌ಎಸ್‌ಎಸ್‌ ಮುಖಂಡರ ಮನೆಗೆ ತೆರಳಿ ಕಿರುಕುಳ ನೀಡುತ್ತಿದೆ. ಮುಸಲ್ಮಾನರ ಆಕ್ರೋಶದ ಬಳಿಕ ಹಳೆಯ ಭಾಷಣಗಳನ್ನು ಕೆದಕಿ ಹಿಂದೂ ಸಮಾಜ ಜಾಗೃತಿ ಮಾಡುತ್ತಿರುವವರ ಮೇಲೆ ಎಫ್‌ಐಆರ್‌ ಮಾಡಲಾಗುತ್ತಿದೆ, ಇದೆಲ್ಲವನ್ನೂ ಮಾಡುತ್ತಿರುವುದು ಕೇವಲ ಮುಸಲ್ಮಾನರಿಗಾಗಿ ಮಾತ್ರ ಎಂಬುದು ಜಗಜ್ಜಾಹೀರಾಗಿದೆ.

ಕೋಮು ನಿಗ್ರಹ ಪಡೆಗೆ ಹಿಂದೂ ಸಂಘಟಕರನ್ನು, ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುವ ಗುರಿ ನೀಡುವ ಬದಲು ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅವ್ಯಾಹತ ಗೋ ಕಳ್ಳತನ ಮತ್ತು ಹತ್ಯೆ, ಲವ್‌ ಜಿಹಾದ್‌, ಅಕ್ರಮ ಮರಳುಗಾರಿಕೆ ಇವುಗಳನ್ನು ನಿಯಂತ್ರಿಸುವ ಗುರಿ ನೀಡಿದರೆ ಶಾಂತಿ ತಾನಾಗಿಯೇ ಮೂಡುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ಯಾರು ಎಂಬ ಸತ್ಯ ಲೋಕಕ್ಕೆ ತಿಳಿದಿದೆ, ಆದರೆ ಕಾಂಗ್ರೆಸ್‌ ಸರ್ಕಾರ ಮಾತ್ರ ಅದರ ಬಗ್ಗೆ ಗಮನಹರಿಸುತ್ತಿಲ್ಲ‌ ಎಂದು‌ ಬಿಜೆಪಿ ಆರೋಪಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande