ರಾಯಚೂರು : ಜೂನ್ 14ರಂದು ವಿದ್ಯುತ್ ವ್ಯತ್ಯಯ
ರಾಯಚೂರು, 12 ಜೂನ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯ ಡ್ಯಾಡಿ ಕಾಲೋನಿಯ ರಸ್ತೆ ಅಗಲೀಕರಣದ ಕಾಮಗಾರಿ ಕೈಗೊಳ್ಳುತ್ತಿರುವುದರ ಪ್ರಯುಕ್ತ ಜೂನ್ 14ರ ಮಧ್ಯಾಹ್ನ 12 ಗಂಟೆಯಿಂದ 04 ಗಂಟೆಯವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕ
ರಾಯಚೂರು : ಜೂನ್ 14ರಂದು ವಿದ್ಯುತ್ ವ್ಯತ್ಯಯ


ರಾಯಚೂರು, 12 ಜೂನ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯ ಡ್ಯಾಡಿ ಕಾಲೋನಿಯ ರಸ್ತೆ ಅಗಲೀಕರಣದ ಕಾಮಗಾರಿ ಕೈಗೊಳ್ಳುತ್ತಿರುವುದರ ಪ್ರಯುಕ್ತ ಜೂನ್ 14ರ ಮಧ್ಯಾಹ್ನ 12 ಗಂಟೆಯಿಂದ 04 ಗಂಟೆಯವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸುವಂತೆ ತಿಳಿಸಿದೆ.

ಅಂದು ಮಧ್ಯಾಹ್ನ ಡ್ಯಾಡಿ ಕಾಲೋನಿ, ಸರ್ಕಾರಿ ಪದವಿ ಕಾಲೇಜು, ಪಿ.ಸಿ.ಬಿ ಕಾಲೋನಿ, ಡುಂಬಾ ಕಾಲೋನಿ, ಸಿಟಿ ಕ್ಲಬ್, ಅಲ್ಲಿ ನಾಯಕ್ ಕಾಲೋನಿ, ಗುರು ಬಸವ ಕಾಲೋನಿ, ಕಾಕತೀಯ ಕಾಲೋನಿ, ಶಾಂತಿ ಕಾಲೋನಿ, ಡಾರ‍್ಸ ಕಾಲೋನಿ, ಸಿಟಿ ಟಾಕೀಸ್ ರೋಡ್, ಎಸ್. ಎನ್.ಟಿ ಟಾಕೀಸ್, ಗಾಂಧಿ ಚೌಕ್, ಮಹಾವೀರ್ ಚೌಕ್, ಮಹಾಳೇಶ್ವರ ವೃತ್ತ, ಕುಂಬಾರ್ ಓಣಿ, ಮಕ್ತಲ ಪೇಟೆ, ಮದ್ದಿಪೇಟೆ, ವಡ್ಡೆಪ್ಪ ಜಿನ್ಮ ಸುರಕ್ಷ ಆಸ್ಪತ್ರೆ, ಗೋಶಾಲ ರಸ್ತೆ, ಮೊಹಲ್ಲಾ ಸಿಯಾತಲಾಬ, ಆಟೋನಗರ, ಶಿವಂ ಆಸ್ಪತ್ರೆ, ಜಿಲ್ಲಾ ಅಗ್ನಿ ಶಾಮಕ ಕಚೇರಿ, ಜಿಲ್ಲಾ ಪಂಚಾಯತಿ, ಗಂಜ್ ರಸ್ತೆ ಯಿಂದ ಬಸವನ ಬಾವಿ, ಜಿಲ್ಲಾ ಅರಣ್ಯ ಕಚೇರಿ, ರಾಯಚೂರು ಒಳ ಚರಂಡಿ ನೀರು ಮತ್ತು ಸಂಬಂಧಿಸಿದ ಪ್ರದೇಶಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande