ಗದಗ, 13 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಸೀಲ್ದಾರ ಅನಿಲ ಬಡಿಗೇರ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾಧಿಕಾರಿ ನಿರ್ದೇಶನದಂತೆ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದ್ದು, ತಾಲೂಕಿನ ಹೊಳೆ-ಇಟಗಿ, ತೊಳಲಿ, ಕಲ್ಲಾಗನೂರ ಮತ್ತು ಸಾಸರವಾಡ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ನದಿ ಪಾತ್ರದ ಕಡೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಅವಶ್ಯಕತೆ ಬಿದ್ದಲ್ಲಿ ಕಾಳಜಿ ಕೇಂದ್ರವನ್ನು ತೆರೆಯುವುದಕ್ಕಾಗಿ ಸ್ಥಳಗಳನ್ನು ಗುರುತಿಸಲಾಗಿದೆ.
ಕಾಳಜಿ ಕೇಂದ್ರಗಳ ನೋಡಲ್ ಅಧಿಕಾರಿಗಳನ್ನಾಗಿ ಹೊಳೆ-ಇಟಗಿ ಗ್ರಾಮಕ್ಕೆ ಗೋಪಾಲ ಲಮಾಣಿ-ಸಮಾಜ ಕಲ್ಯಾಣಾಧಿಕಾರಿ, ಸಾಸಲವಾಡ ಗ್ರಾಮಕ್ಕೆ ರೇವಣೆಪ್ಪ ಮನಗೂಳಿ-ಸಹಾಯಕ ಕೃಷಿ ನಿರ್ದೆಶಕ, ತೊಳಲಿ ಗ್ರಾಮಕ್ಕೆ ಮಲ್ಲಿಕಾರ್ಜುನ ಪಾಟೀಲ-ಎಇಇ ಪಿಡಬ್ಲ್ಯುಡಿ, ಕಲ್ಲಿಗನೂರ ಗ್ರಾಮಕ್ಕೆ ನಿಂಗಪ್ಪ ಓಲೇಕಾರ-ಸಹಾಯಕ ನಿರ್ದೆಶಕ ಪಶು ಸಂಗೋಪನೆ ಇವರುಗಳು ನೇಮಕವಾಗಿದ್ದಾರೆ.
ಅತೀ ಮಳೆಯಿಂದ ಇಲ್ಲಿಯವರೆಗೂ ತಾಲೂಕಿನಲ್ಲಿ ಮನೆ ಹಾನಿ, ಜೀವಹಾನಿಯಾದ ಬಗ್ಗೆ ಯಾವುದೇ ವರದಿ ಆಗಿಲ್ಲವೆಂದು ತಿಳಿಸಿದರು. ಕಂದಾಯ ನಿರೀಕ್ಷಕ ಕಾತ್ರಾಳ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP