ಕಲಬುರಗಿ, 13 ಜೂನ್ (ಹಿ.ಸ.) :
ಆ್ಯಂಕರ್ : ಕಲಬುರಗಿಯಲ್ಲಿ ಮಳೆಯರಾಯ ಅವಾಂತರವೇ ಸೃಷ್ಟಿ ಮಾಡಿದ್ದು, ನಿರಂತರ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿದ ಪರಿಣಾಮ ಹಲವು ಕುಟುಂಬಗಳು ಪರದಾಟ ನಡೆಸಿದ ಘಟನೆ ಕಲಬುರಗಿ ನಗರದ ಬಾಪುನಗರ ಬಡಾವಣೆಯಲ್ಲಿ ನಡೆದಿದೆ.
ಖನ್ನಾ ಪಾಟೀಲ್ ಎಂಬುವವರು ಸೇರಿದಂತೆ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದು, ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ ಅವೈಜ್ಞಾನಿಕ ಚರಂಡಿ ಕಾಮಾಗಾರಿಯಿಂದ ಪ್ರತಿ ಭಾರಿ ಇದೆ ರೀತಿ ಸಮಸ್ಯೆ ಉಂಟಾಗುತ್ತಿದೆ ಎಂದು ಬಡಾವಣೆಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ ನೀರು ಮನೆಗೆ ನುಗ್ಗಿದ ಪರಿಣಾಮ ದುರ್ವಾಸನೆ ಹೆಚ್ಚಾಗಿದ್ದು, ದವಸ ಧಾನ್ಯಗಳು ಸಂಪೂರ್ಣ ನಾಶವಾಗಿವೇ. ಅಲ್ಲದೆ ಪುಟ್ಟಾಣಿ ಮಕ್ಕಳೊಂದಿಗೆ ಕುಟುಂಬಸ್ಥರು ರಾತ್ರಿ ಇಡಿ ಜಾಗರಣೆ ನಡೆಸಬೇಕಾದ ಸನ್ನಿವೇಶ ಎದುರಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Samarth biral