ಮಣ್ಣೂರ ಆಸ್ಪತ್ರೆ ವೈದ್ಯರ ಯಶಸ್ಸಿ ಶಸ್ತ್ರಚಿಕಿತ್ಸೆ
ಕಲಬುರಗಿ, 12 ಜೂನ್ (ಹಿ.ಸ.) : ಆ್ಯಂಕರ್ : ಗುರುಬಾಯಿ ಎಂಬ 52 ವರ್ಷದ ಮಹಿಳೆಗೆ ಅಂಡಾಶಾದ ಕ್ಯಾನ್ಸರ್ ಆಗಿದ್ದು, ಹೊಟ್ಟೆಯಲ್ಲಿ 05 ಕಿಲೊ ಗಾತ್ರದ 25x22 ಸೆ.ಮಿ ಅಳತೆಯ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊರ ತೆಗೆಯುವ ಮೂಲಕ ಮಣ್ಣೂರು ಆಸ್ಪತ್ರೆಯ ವೈದ್ಯರು ಮಹಿಳೆಗೆ ಮರುಜೀವ ನೀಡಿ
ಮಣ್ಣೂರ ಆಸ್ಪತ್ರೆ ವೈದ್ಯರ ಯಶಸ್ಸಿ ಶಸ್ತ್ರಚಿಕಿತ್ಸೆ


ಕಲಬುರಗಿ, 12 ಜೂನ್ (ಹಿ.ಸ.) :

ಆ್ಯಂಕರ್ : ಗುರುಬಾಯಿ ಎಂಬ 52 ವರ್ಷದ ಮಹಿಳೆಗೆ ಅಂಡಾಶಾದ ಕ್ಯಾನ್ಸರ್ ಆಗಿದ್ದು, ಹೊಟ್ಟೆಯಲ್ಲಿ 05 ಕಿಲೊ ಗಾತ್ರದ 25x22 ಸೆ.ಮಿ ಅಳತೆಯ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊರ ತೆಗೆಯುವ ಮೂಲಕ ಮಣ್ಣೂರು ಆಸ್ಪತ್ರೆಯ ವೈದ್ಯರು ಮಹಿಳೆಗೆ ಮರುಜೀವ ನೀಡಿದ್ದಾರೆ.

ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮಣ್ಣೂರ ಮಲ್ಟಿ ಸ್ಟೇಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಮಾತನಾಡಿ, ಗುರುಬಾಯಿ ಎಂಬ ಮಹಿಳೆಗೆ ಕಳೆದ 4 ತಿಂಗಳಿನಿಂದ ದಿನದಿಂದ ದಿನಕ್ಕೆ ಹೊಟ್ಟೆ ಮುಂದಕ್ಕೆ ಬರುತ್ತಿತ್ತು ಹೊಟ್ಟೆಯ ಗಾತ್ರ ಕೂಡ ಹೆಚ್ಚಾಗುತ್ತಿತ್ತು, ಆದರೆ ಅವರು ಅದಕ್ಕೆ ನಿರ್ಲಕ್ಷ ಮಾಡಿದರು, 2 ರಿಂದ 3 ದಿನಗಳ ವರೆಗೆ ಹೊಟ್ಟೆಯಲ್ಲಿ ನೊವು ಕಾಣಿಸಿಕೊಂಡಿತ್ತು.

ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ಇಲ್ಲಿನ ತಜ್ಞ ವೈದ್ಯರು ಎಲ್ಲಾ ಅಯಾಮಗಳಲ್ಲಿ ತಪಾಸಣೆ ನಡೆಸಿ ಎಮ್.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಅಂಡಾಂಶಾದಲ್ಲಿ ಕ್ಯಾನ್ಸರ್ ಆಗಿದ್ದು ಕಂಡು ಬರುತ್ತದೆ, ಮೊದಲನೆ ಹಂತದ ಕ್ಯಾನ್ಸರ್ ಆಗಿರುವುದು ಖಚಿತವಾಗಿರುತ್ತದೆ, ಆಸ್ಪತ್ರೆಯ ನೂರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಗೆ ನಿರ್ಧರಿಸಿ ಸಮಯ ವ್ಯರ್ಥಮಾಡದೆ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ, 5ಕೆ.ಜಿ ತೂಕದ 25x22 ಸೆ.ಮಿ ಅಳತೆ ಗಡ್ಡೆ ಇರುತ್ತದೆ, ಈ ಶಸ್ತ್ರ ಚಿಕಿತ್ಸೆ 2 ಅಥವಾ 3 ತಿಂಗಳ ವರೆಗೆ ನಿಲರ್ಕ್ಷ ಮಾಡಿದರೆ, ಕ್ಯಾನ್ಸರ್ 3ನೇ ಹಂತಕ್ಕೆ ತಲುಪುತ್ತಿತ್ತು, ಹಾಗೂ ಜೀವಕ್ಕೆ ಹಾನಿ ಕೂಡ ಅಗುವ ಸಂಭವ ಇತ್ತು ಎಂದರು.

ಸ್ತ್ರಿರೋಗ ಕ್ಯಾನ್ಸರ್ ತಜ್ಞ ವೈದ್ಯರಾದ ಡಾ. ಸುಮಯ್ಯ ಸನಾ ಅವರು ಮಾತನಾಡಿ, ಶಸ್ತ್ರ ಚಿಕಿತ್ಸೆ ಮಾಡುವುದು ತುಂಬಾ ದೊಡ್ಡ ಸವಾಲಾಗಿತ್ತು ಯಾಕೆದರೆ ಹೊಟ್ಟೆಯಲ್ಲಿ ಮೀತಿ ಮೀರಿ ದೊಡ್ಡ ಗಾತ್ರದ ಕ್ಯಾನರ್ ಗಡ್ಡೆ ಆಗಿದ್ದು, ಶಸ್ತ್ರ ಚಿಕಿತ್ಸೆ ಮಾಡುವಾಗ ಗಡ್ಡೆ, ಅನ್ನನಾಳ, ಮುತ್ರನಾಳ,ರಕ್ತನಾಳ ಸೇರಿದಂತೆ ದೇಹದ ಯಾವುದೆ ಒಂದು ಅಂಗ ಅದಕ್ಕೆ ಮೆತ್ತಕೊಂಡರೆ ಆ ಭಾಗ ಕೂಡ ಕತ್ತರಿಸುವ ಸಂಭವ ಇರುತ್ತದೆ, ಜೊತೆಗೆ ಇವರ ಹಿಮೆಗ್ಲೋಬಿನ್ ಕೂಡ ಕಡಿಮೆ ಇತ್ತು ಆದಕಾರಣ ರಕ್ತಸ್ರಾವ ಆಗುವ ಸಂಭವ ಹಿಚ್ಚಿನ ಪ್ರಮಾಣದಲ್ಲಿತ್ತು, ಆದರೆ ನಮ್ಮ ನುರಿತ ತಂಡ ಎಲ್ಲಾ ಸೂಕ್ಷ್ಮವಾಗಿ ಗಮನಿಸಿ ಸುಮಾರು 4 ಗಂಟೆಗೂ ಅಧಿಕಾ ಶಸ್ತ್ರ ಚಿಕಿತ್ಸೆ ಮಾಡಿ 5 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿದ್ದಾರೆ, ಇ0ತಹ ಲಕ್ಷಣಗಳು ಒಂದು ಲಕ್ಷ ಜನಸಂಖ್ಯೆಯಲ್ಲಿ 7 ಜನರಲ್ಲಿ ಕಂಡು ಬರುತ್ತದೆ ಎಂದು ತಿಳಿಸಿದ್ದರು. ಬಹುತೇಕ ಮಹಿಳೆಯರು ಮಹಿಳೆಯರಿಯಾವುದೆ ಒಂದು ಗಡ್ಡೆ ಆದರೆ ನಿರ್ಲಕ್ಷ ಮಾಡುತ್ತಾರೆ, ಆದರೆ ಯಾರು ಕೂಡ ನಿರ್ಲಕ್ಷ ಮಾಡಬಾರದು ನಿಮ್ಮ ಸಮಿಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಬೇಕು ರೋಗ ಹರಡುವ ಮುನ್ನವೆ ರೋಗಕ್ಕೆ ನಿರ್ಮೂಲನೆ ಮಾಡಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಸತೀಶ ಶರಣಪ್ಪ, ಡಾ. ಜೀನತ್, ಡಾ.ಇಸ್ಮಾಯಿಲ್ ಚಾಂದ, ವಿಕಿ ಪವಾರ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande