ರಾಜ್ಯದ ರೈತ ಬಾಂಧವರಿಗೆ ಸಲಹೆ
ಗದಗ, 01 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ರಸಗೊಬ್ಬರ ಬಳಕೆಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2000-01ರಲ್ಲಿ 27.91 ಲಕ್ಷ ಮೆ.ಟನ್ ನಷ್ಟು ಇದ್ದ ಬಳಕೆ ಪ್ರಮಾಣವು 2024-25ನೇ ಸಾಲಿಗೆ 48.86 ಲಕ್ಷ ಮೆ.ಟನ್ ಆಗಿದೆ. ರಸಗೊಬ್ಬರ ಬಳಕೆಯ ಪ್ರಮಾಣವನ್ನು ಮಣ್ಣಿನ ಆರೋಗ್ಯ ಕಾಪಾಡು
ಪೋಟೋ


ಗದಗ, 01 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ರಸಗೊಬ್ಬರ ಬಳಕೆಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2000-01ರಲ್ಲಿ 27.91 ಲಕ್ಷ ಮೆ.ಟನ್ ನಷ್ಟು ಇದ್ದ ಬಳಕೆ ಪ್ರಮಾಣವು 2024-25ನೇ ಸಾಲಿಗೆ 48.86 ಲಕ್ಷ ಮೆ.ಟನ್ ಆಗಿದೆ. ರಸಗೊಬ್ಬರ ಬಳಕೆಯ ಪ್ರಮಾಣವನ್ನು ಮಣ್ಣಿನ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಕಡಿಮೆಗೊಳಿಸಬೇಕಾಗಿದೆ.

ಮಣ್ಣಿನ ಆರೋಗ್ಯವು ಚೆನ್ನಾಗಿರಬೇಕಾದಲ್ಲಿ ಸಾರಜನಕ:ರಂಜಕ:ಪೊಟ್ಯಾಶ್, ಅನುಪಾತವು 4:2:1 ಇರಬೇಕು. ರಾಜ್ಯದಲ್ಲಿ 2024-25ರಲ್ಲಿ 4.79:2.45:1.00 ಆಗಿದೆ, ಅದೇ ಗದಗ ಜಿಲ್ಲೆಯಲ್ಲಿ 7.44:4.31:1.00 ಇದೆ. ಯೂರಿಯಾ ಮತ್ತು ಡಿ.ಎ.ಪಿ.ರಸಗೊಬ್ಬರಗಳ ಹೆಚ್ಚಿನ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಕಾರಣ, ರೈತ ಬಾಂಧವರು ರಸಗೊಬ್ಬರಗಳ ಸಮತೋಲನ ಬಳಕೆ ಹಾಗೂ ಸಂಯುಕ್ತ ರಸಗೊಬ್ಬರಗಳ ಬಳಕೆಗೆ ಮುಂದಾಗಬೇಕು.

ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಇಂಗಾಲ ಮುಖ್ಯವಾಗಿದೆ. ಪೋಷಕಾಂಶಗಳ ಲಭ್ಯತೆ, ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ, ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳನ್ನು ಕಾಪಾಡಲು ಇದು ಅವಶ್ಯಕವಾಗಿದೆ. ಸಾವಯವ ಇಂಗಾಲದ ಪ್ರಮಾಣವು ಶೇ.0.5ಕ್ಕಿಂತ ಕಡಿಮೆ ಇದ್ದರೆ ಆ ಮಣ್ಣಲ್ಲಿ ಸಾವಯವ ಇಂಗಾಲದ ಕೊರತೆ ಇದೆ ಎಂದು ಪರಿಗಣಿಸಲಾಗುತ್ತದೆ. ರಾಜ್ಯಾದ್ಯಂತ ಮಣ್ಣು ಮಾದರಿಗಳ ಪರೀಕ್ಷೆೆಯ ಆಧಾರದ ಮೇಲೆ ರಾಜ್ಯದಲ್ಲಿ ಸಾವಯವ ಇಂಗಾಲದ ಕೊರತೆ ಶೇ.42.15ರಷ್ಟು ಪ್ರದೇಶದಲ್ಲಿ ಕಂಡುಬಂದಿದೆ.

ಗದಗ ಜಿಲ್ಲೆಯಲ್ಲಿ ಶೇ.21.37ರಷ್ಟು ಪ್ರದೇಶದಲ್ಲಿ ಶೇ.0.5ಕ್ಕಿಂತ ಕಡಿಮೆ ಸಾವಯವ ಇಂಗಾಲ ಇದ್ದು, ಶೇ.78.63ರಷ್ಟು ಪ್ರದೇಶದಲ್ಲಿ ಶೇ.0.5ರಿಂದ 1 ಸಾವಯವ ಇಂಗಾಲ ಕಂಡು ಬಂದಿದೆ.

ರೈತ ಬಾಂಧವರು ಮಣ್ಣು ಪರೀಕ್ಷೆ ಮಾಡಿಸಿ, ಫಲಿತಾಂಶದ ಆಧಾರದ ಮೇಲೆ ರಸಗೊಬ್ಬರಗಳನ್ನು ಸಮತೋಲನವಾಗಿ ಬಳಸಲು ಕೋರಿದೆ. ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಇತ್ಯಾದಿ ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಕೋರಿದೆ. ಅಂತರ್ ಬೆಳೆ ಪದ್ಧತಿ, ಬೆಳೆ ಪರಿವರ್ತನೆ ಹಾಗೂ ದ್ವಿದಳ ಧಾನ್ಯಗಳ ಬೇಸಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande