ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ ; ಕಚೇರಿ ಮನೆಯಲ್ಲಿ ಪರಿಶೀಲನೆ
ಬಳ್ಳಾರಿ, 31 ಮೇ (ಹಿ.ಸ.) : ಆ್ಯಂಕರ್ : ಲೋಕಾಯುಕ್ತ ಪೆÇಲೀಸರು ಬಳ್ಳಾರಿ ಪಿಡಬ್ಲ್ಯುಡಿ ಸೂಪರಿಂಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ಅವರ ಕಚೇರಿ ಮತ್ತು ಕಲ್ಬುರ್ಗಿ ಮತ್ತು ಬಳ್ಳಾರಿ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ದಾಳಿಯು ರಾತ್ರಿ 8 ಗಂಟೆಯಾದರೂ ಮುಂದುವರೆದಿದೆ. ಕಲ್ಬುರ್ಗಿ ಮೂಲದ
ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ ; ಕಚೇರಿ ಮನೆಯಲ್ಲಿ ಪರಿಶೀಲನೆ


ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ ; ಕಚೇರಿ ಮನೆಯಲ್ಲಿ ಪರಿಶೀಲನೆ


ಬಳ್ಳಾರಿಯಲ್ಲಿ ಲೋಕಾಯುಕ್ತ ದಾಳಿ ; ಕಚೇರಿ ಮನೆಯಲ್ಲಿ ಪರಿಶೀಲನೆ


ಬಳ್ಳಾರಿ, 31 ಮೇ (ಹಿ.ಸ.) :

ಆ್ಯಂಕರ್ : ಲೋಕಾಯುಕ್ತ ಪೆÇಲೀಸರು ಬಳ್ಳಾರಿ ಪಿಡಬ್ಲ್ಯುಡಿ ಸೂಪರಿಂಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ಅವರ ಕಚೇರಿ ಮತ್ತು ಕಲ್ಬುರ್ಗಿ ಮತ್ತು ಬಳ್ಳಾರಿ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ದಾಳಿಯು ರಾತ್ರಿ 8 ಗಂಟೆಯಾದರೂ ಮುಂದುವರೆದಿದೆ.

ಕಲ್ಬುರ್ಗಿ ಮೂಲದ ಮತ್ತು ರಾಜಕೀಯವಾಗಿ ಸಾಕಷ್ಟು ಪ್ರಭಾವಿ ಎಂದು ಗುರುತಿಸಿಕೊಂಡಿರುವ ಅಮೀನ್ ಮುಕ್ತಾರ್ ಅವರ ಕಲಬುರ್ಗಿ ನಿವಾಸದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ-ಆಭರಣಗಳು ಪತ್ತೆಯಾಗಿವೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿದ್ದು, ಖಚಿತವಾಗಿಲ್ಲ.

ಹೊಸಪೇಟೆ ಲೋಕಾಯುಕ್ತ ಇನ್ಸಪೆಕ್ಟರ್ ಅಮರೇಶ್ ಹುಬ್ಬಳಿ ಅವರ ನೇತೃತ್ವದ ತಂಡವು, ಬಳ್ಳಾರಿ ಹೊಸ ಡಿಸಿ ಕಚೆರಿ ಪಕ್ಕದಲ್ಲಿರುವ ಲೋಕೊಪಯೋಗಿ ಇಲಾಖೆಯ ವೃತ್ತ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande