ಡಿಸಿಸಿ ಬ್ಯಾಂಕ್ ಮತ್ತು ಪಿ.ಎಲ್.ಡಿ ಬ್ಯಾಂಕ್ ನೂತನ ನಿರ್ದೆಶಕರಿಗೆ ಸಹಕಾರ ಒಕ್ಕೂಟದಿಂದ ಸನ್ಮಾನ
ಡಿಸಿಸಿ ಬ್ಯಾಂಕ್ ಮತ್ತು ಪಿ.ಎಲ್.ಡಿ ಬ್ಯಾಂಕ್ ನೂತನ ನಿರ್ದೆಶಕರಿಗೆ ಸಹಕಾರ ಒಕ್ಕೂಟದಿಂದ ಸನ್ಮಾನ
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾದ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ರಘುಪತಿಗೌಡರನ್ನು ಕೋಲಾರ ಸಹಕಾರಿ ಯೂನಿಯನ್‌ನಿಂದ ಸನ್ಮಾನಿಸಲಾಯಿತು.


ಕೋಲಾರ, ೩೧ ಮೇ (ಹಿ.ಸ) :

ಆ್ಯಂಕರ್ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ೩ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಮತ್ತು ವಿ. ರಘುಪತಿರೆಡ್ಡಿ ಹಾಗೂ ಕೋಲಾರ ತಾಲ್ಲೂಕು ಪಿ.ಎಲ್.ಡಿ. ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಕಲ್ವಮಂಜಲಿ ಟಿ.ಕೆ. ಬೈರೇಗೌಡ ಮತ್ತು ಕುರುಗಲ್ ವೆಂಕಟೇಶ್ ರವರಿಗೆ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಡಿ.ಆರ್. ರಾಮಚಂದ್ರೇಗೌಡ, ನಿರ್ದೇಶಕರಾದ ಉರಿಗಿಲಿ ಎಸ್.ಆರ್. ರುದ್ರಸ್ವಾಮಿ, ಅ.ಮು. ಲಕ್ಷ್ಮೀನಾರಾಯಣ, ಮೂರಾಂಡಹಳ್ಳಿ ಡಾ. ಇ. ಗೋಪಾಲಪ್ಪ, ಪೆಮ್ಮಶೆಟ್ಟಹಳ್ಳಿ ಎಸ್. ಸುರೇಶ್, ಪಿ.ಎಂ. ವೆಂಕಟೇಶ್, ಎನ್. ಶಂಕರನಾರಾಯಣಗೌಡ, ಎನ್. ನಾಗರಾಜ್, ಕೆ.ಎಂ. ಮಂಜುನಾಥ್, ವಿ. ಪಾಪಣ್ಣ, ಪಿ.ಎನ್. ಕೃಷ್ಣಾರೆಡ್ಡಿ, ಕೆ.ಎಂ. ವೆಂಕಟೇಶಪ್ಪ, ಷೇಕ್ ಮಹಮದ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಚಿತ್ರ : ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾದ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ರಘುಪತಿಗೌಡರನ್ನು ಕೋಲಾರ ಸಹಕಾರಿ ಯೂನಿಯನ್‌ನಿಂದ ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande