ಕಲಬುರಗಿ, 29 ಮೇ (ಹಿ.ಸ.) :
ಆ್ಯಂಕರ್ : ಕಲಬುರಗಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಮಳೆಗಾಲಕ್ಕೂ ಮುನ್ನೆಗೆ ಸಿಉರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಹೌದು, ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನಲೆ ಕಲಬುರಗಿ ನಗರ ಸೇರಿದಂತೆ ಹಲವೆಡೆ ಅವಘಗಡಗಳು ಸಂಭವಿಸಿದ್ದು, ಕಮಲಾಪುರ ತಾಲೂಕಿನ ಹಿಪ್ಪರಗಾ ಗ್ರಾಮದ ಹಳ್ಳ ಉಕ್ಕಿ ಹರಿಯುತ್ತಿದೆ. ಸೇತುವೆ ಮುಳುಗಡೆ ಸಾರ್ವಜನಿಕರು ಪರದಾಟ ನಡೆಸಿದ ದೃಶ್ಯಗಳು ಕಂಡುಬಂದವು. ಇನ್ನು ಸೇತುವೆ ಮುಳುಗಡೆಯಾಗಿದರಿಂದ ಕುದಮೂಡ-ಕಲಕುಟಗಾ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡ ಹಿನ್ನಲೆ ವಾಹನ ಸವಾರರ ಪರದಾಟ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Samarth biral