ಬಳ್ಳಾರಿ, 30 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ತೇರು ಬೀದಿಯಲ್ಲಿರುವ ಶ್ರೀಪಾಶ್ರ್ವನಾಥ ಜೈನ ಶ್ವೇತಾಂಬರ ದೇವಸ್ಥಾನ ನಿರ್ಮಾಣವಾಗಿ ಶತಮಾನ ಆಗುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಲಿಯು ಐದು ದಿನಗಳ ವಿಶೇಷ ಶತಮಾನೋತ್ಸವವನ್ನು ಜೂನ್ 2 ರಿಂದ ಕೊಟ್ಟೂರು ಸ್ವಾಮಿ ಮಠದಲ್ಲಿ ಹಮ್ಮಿಕೊಂಡಿದೆ.
ಶ್ರೀ ಪಾಶ್ರ್ವನಾಥ ಜೈನ್ ಶ್ವೇತಾಂಬರ ಸಂಘದ ಕಾರ್ಯದರ್ಶಿ ರೋಷನ್ ಜೈನ್ ಮತ್ತು ಪದಾಧಿಕಾರಿಗಳು ಈ ಮಾಹಿತಿ ನೀಡಿದ್ದು, ಐದು ದಿನಗಳ ಕಾಲ ಮಂದಿರದಲ್ಲಿ ಧಾರ್ಮಿಕ ಪೂಜೆ, ಪ್ರಸಾದ ವಿತರಣೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲಾ ಜಾತಿ, ಜನಾಂಗದವರ ಪಾಲ್ಗೊಳ್ಳುವಿಕೆಗೆ ಅವಕಾಶವಿದೆ ಎಂದರು.
ಶತಮಾನೋತ್ಸವದ ಮೊದಲ ದಿನ ಆಚಾರ್ಯ ಶ್ರೀ ವಿಮಲ್ ಸಾಗರ್ ಸುರೇಶ್ವರ್ ಜಿ ಮಹಾರಾಜರು ಮತ್ತು ಅವರ ಶಿಷ್ಯಂದಿರಿಂದ ಹಂಚಾನಿಕ ಮಹೋತ್ಸವ. ಜೂನ್ 5ರಂದು ಪರಮಾತ್ಮನ ಭವ್ಯ ಶೋಭಾಯಾತ್ರೆ ಬೆಳಗ್ಗೆ 8.0 ಕ್ಕೆ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ ಎಂದರು.
ದೇವಸ್ಥಾನದ ಆಡಳಿತ ಮಂಡಲಿ ಅಧ್ಯಕ್ಷರಾದ ಉತ್ಸವ ಲಾಲ್ ಬಾಗ್ರೇಚ, ಅನಿಲ್ ಪುಮಾನಿ, ಪ್ರಕಾಶ್ ಜೈನ್, ಪ್ರಕಾಶ್ ಮೆಹತಾ, ಕಾಂತಿಲಾಲ್ ಜೈನ್, ವಿನೋದ್ ಬಾಗ್ರೇಚಾ, ಸೂರಜ್ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್