ಬಳ್ಳಾರಿ, 28 ಮೇ (ಹಿ.ಸ.)
ಆ್ಯಂಕರ್: ಅಖಂಡ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ 102ನೇ ಜನ್ಮದಿನಾಚರಣೆ ಅಂಗವಾಗಿ ಅವರ ಅಭಿಮಾನಿಗಳು ಮತ್ತು ಎನ್ಟಿಆರ್ ಟ್ರಸ್ಟ್ ಬಳ್ಳಾರಿಯಲ್ಲಿ ಸಾರ್ವಜನಿಕರಿಗಾಗಿ ಸಿಹಿ ಮತ್ತು ಅನ್ನದಾನವನ್ನು ನೆರವೇರಿಸಿತು.
ಎನ್ಟಿಆರ್ ಟ್ರಸ್ಟ್ ನಗರದಲ್ಲಿ ಉಚಿತವಾಗಿ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದು, ಎನ್.ಟಿ.ಆರ್. ಅವರ 102ನೇ ಜನ್ಮ ದಿನದ ಅಂಗವಾಗಿ ವಿಶೇಷ ಭೋಜನವನ್ನು ವಿತರಣೆ ಮಾಡಿತು.
ಕಮ್ಮ ಭವನದ ಮುಂಭಾಗದಲ್ಲಿರುವ ಎನ್.ಟಿ. ರಾಮರಾವ್ ಅವರ ಪುತ್ಥಳಿಗೆ ಟ್ರಸ್ಟ್ನ ಸದಸ್ಯರು ಮತ್ತು ರಾಮರಾವ್ ಅವರ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿದರು.
ಟ್ರಸ್ಟ್ನ ಅಧ್ಯಕ್ಷ ಜಿ. ಲಾಲ್ಮೋಹನ್, ಉಪಾಧ್ಯಕ್ಷ ಶ್ರೀನಿವಾಸುಲು. ಎಂ, ಟ್ರಸ್ಟ್ನ ಸಂಚಾಲಕ ಎನ್. ದುರ್ಗಾ ಫಣೀಂದ್ರ ಇನ್ನಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್