ಕುಂಬಾರಹಳ್ಳಿ ಶಾಲಾ ಕಟ್ಟಡ ದುರಸ್ತಿಗೆ ಗ್ರಾಮಸ್ಥರ ಒತ್ತಾಯ
ಕುಂಬಾರಹಳ್ಳಿ ಶಾಲಾ ಕಟ್ಟಡ ದುರಸ್ತಿಗೆ ಗ್ರಾಮಸ್ಥರ ಒತ್ತಾಯ
ಕುಂಬಾರಹಳ್ಳಿ ಶಾಲಾ ಕಟ್ಟಡ ದುರಸ್ತಿಗೆ ಗ್ರಾಮಸ್ಥರ ಒತ್ತಾಯ


ಕೋಲಾರ, ೨೭ ಮೇ(ಹಿ.ಸ) :

ಆ್ಯಂಕರ್ : ಕೋಲಾರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸಿ ನಂತರ ಕಾಂಪೌ0ಡ್ ಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಮಂಗಳವಾರ ಸಂಬ0ಧಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಶಾಲೆಯ ಕಟ್ಟಡವು ತುಂಬಾ ಹಳೆಯದಾಗಿದ್ದು ಮಳೆ ಬಂದರೆ ಒಳಗೆ ನೀರು ಬರುತ್ತದೆ ಸುಮಾರು ೩೦ ಮಕ್ಕಳು ಇರುವ ಶಾಲೆ ಇದಾಗಿದ್ದು ಮುಂಜಾಗ್ರತಾ ದೃಷ್ಟಿಯಿಂದ ಕಟ್ಟಡವನ್ನು ದುರಸ್ತಿ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಶಾಲೆಗೆ ಈಗಾಗಲೇ ಕಲ್ಲಿನ ಕಾಂಪೌ0ಡ್ ಗೋಡೆ ಇದ್ದರೂ ಸಹ ಕೆಲವರ ಸ್ವಾರ್ಥಕ್ಕಾಗಿ ಗ್ರಾಮಸ್ಥರಿಗೆ ತಿಳಿಸದೇ ಕಲ್ಲಿನ ಗೋಡೆಯನ್ನು ಕೆಡವಿದ್ದಾರೆ. ಹಳೆಯ ಕಟ್ಟಡ ದುರಸ್ತಿಯಾಗದೇ ಕಾಂಪೌ0ಡ್ ನಿರ್ಮಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗ್ರಾಮಸ್ಥರು ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವರಿಕೆ ಮಾಡಿದರು.

ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಸುಶೀಲಾ ಮಾತನಾಡಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕಾಂಪೌ0ಡ್ ಇದ್ದರೂ ಕೆಡವಿದ್ದಾರೆ ಸರಿಯಾದ ಶೌಚಾಲಯ, ನೀರಿನ ಸಮಸ್ಯೆಯಿಂದಾಗಿ ವಿಧ್ಯಾರ್ಥಿಗಳು ಹೊರಗಡೆ ಹೋಗಬೇಕಾಗಿದೆ ಮೂಲಭೂತ ಸೌಕರ್ಯಗಳನ್ನು ಶಾಲೆಗೆ ಒದಗಿಸಿ ಹಳೆಯ ಕಟ್ಟಡ ದುರಸ್ತಿ ಮಾಡಿದ ನಂತರ ಕಾಂಪೌ0ಡ್ ನಿರ್ಮಿಸುವಂತೆ ಒತ್ತಾಯ ಮಾಡಿದರು.

ಗ್ರಾಮಸ್ಥರಾದ ಬಿ.ಎನ್.ಅನಂತಕುಮಾರ್, ವೆಂಕಟೇಶಪ್ಪ, ನಾರಾಯಣಸ್ವಾಮಿ, ಚಂಗಮ್ಮ ವೆಂಕಟೇಶಪ್ಪ, ಕೆ.ಎಚ್.ಮಂಜುನಾಥ, ನಾರಾಯಣಮ್ಮ, ರತ್ನಮ್ಮ, ಸೊಣ್ಣಪ್ಪ, ನಾಗರಾಜ, ಅಭಿಲಾಷ, ಅರುಣ್, ನವೀನ್, ಹರೀಶ್, ಕೆ ಏನ್. ಗಂಗಾಧರ್, ರವಿ, ಕುಮಾರ್, ಪೆದ್ದಣ್ಣ, ಗೊಂದೋಡಿಪಲ್ಲಿ ವೆಂಕಟೇಶಪ್ಪ, ಮುಂತಾದವರು ಇದ್ದರು.

ಚಿತ್ರ : ಕೋಲಾರ ನಗರದ ಹೊರ ವಲಯದ ಕುಂಬಾರಹಳ್ಳಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ದುರಸ್ತಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande