ಸವಿತಾ ಸಮಾಜವು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು : ಪಾಟೀಲ್
ಗದಗ, 27 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿ ಆರ್ಥಿಕವಾಗಿ ಬಲಾಬಳ್ಳಾರು ಹಿರಿಯರ ಆಶಯದಂತೆ ಮತ್ತು ಸವಿತಾ ಸಮಾಜ ಹಿಂದುಳಿದ ವರ್ಗ ಪತ್ತಿನ ಸಹಕಾರ ಸಂಘ ಸ್ಥಾಪನೆಗೊಂಡಿದ್ದು, ಅದರೊಂದಿಗೆ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯವೂ ಉದ್ಘಾಟನೆಗೊಂ
ಪೋಟೋ


ಗದಗ, 27 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿ ಆರ್ಥಿಕವಾಗಿ ಬಲಾಬಳ್ಳಾರು ಹಿರಿಯರ ಆಶಯದಂತೆ ಮತ್ತು ಸವಿತಾ ಸಮಾಜ ಹಿಂದುಳಿದ ವರ್ಗ ಪತ್ತಿನ ಸಹಕಾರ ಸಂಘ ಸ್ಥಾಪನೆಗೊಂಡಿದ್ದು, ಅದರೊಂದಿಗೆ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯವೂ ಉದ್ಘಾಟನೆಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಹರ್ಷ ವ್ಯಕ್ತಪಡಿಸಿದರು.

ಗದಗ ನಗರದ ವಿವೇಕಾನಂದ ರಸ್ತೆಯ ಕಮೀತ್ತರ ಕಾಂಪ್ಲೆಕ್ಸ್‌ನಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸ್ಥಾಪನೆಗೊಂಡ ಸವಿತಾ ಸಮಾಜ ಹಿಂದುಳಿದ ವರ್ಗ ಪತ್ತಿನ ಸಹಕಾರ ಸಂಘ ಹಾಗೂ ಗದಗ

ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಸವಿತಾ ಸಮಾಜವು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್.

ಹಡಪದ ಮಾಡುತ್ತಿರುವ ಸಮಾಜ ಪರ, ರಚನಾತ್ಮಕ ಸೇವಾ ಕಾರ್ಯಕ್ಕೆ ಸಮಸ್ತ ಸವಿತಾ ಕ್ಷೌಲಕ ಬಾಂಧವರು ಕೈಜೋಡಿಸುವ ಮೂಲಕ ಅವರ ಶಕ್ತಿ ಹೆಚ್ಚಿಸಲು ಮಾಂದಾಗಬೇಕು ಎಂದರು. ಕರ್ನಾಟಕ ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಹನಮಂತಪ್ಪ ಕಾರ್ಯದರ್ಶಿ ರಾಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಸಂಸ್ಥಾಪಕ ಕೃಷ್ಣಾ ಎಚ್.ಹಡಪದ ಮಾತನಾಡಿ, ಗಂಗಿಮಡಿಯಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಶ್ರೀ ನಾಗದೇವರ ದೇವಸ್ಥಾನಕ್ಕೆ 10 ಲಕ್ಷ ರೂ ಹಾಗೂ ಮರಾಠ ಕ್ಷೌರಿಕ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ಸೇರಿದಂತೆ 52 ಬಡ ಕುಟುಂಬಗಳಿಗೆ ಆಶ್ರಯ ಮನೆಗಳು ಇಗಾಗಲೇ ಮಂಜೂರಾಗಿದ್ದು, ಸವಿತಾ ಸಮಾಜದ ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ಸಲೂನ್ ಕುರ್ಚಿಗಳು ಹಾಗೂ ಸಲಕರಣೆಗಳನ್ನು ಮತ್ತು ಇನ್ನಿತರ ಅನುದಾನಗಳನ್ನು ಒಗಿಸಲು ಆಡಳಿತಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರವಿಕುಮಾರ ರಡ್ಡಿ, ಅಬ್ದುಲಮುನಾಫ್ ಮುಲ್ಲಾ, ಪರಶುರಾಮ (ಬಜ್ಜು) ರಾಂಪೂರ, ವೆಂಕಟೇಶ ರಾಂಪೂರ, ಯಲ್ಲಪ್ಪ ರಾಯಚೂರ, ಅಶೋಕ ಮಾನೆ, ಪಾಂಡು ಕಾಳೆ, ಕಿರಣ ರಾಂಪೂರ, ಜಂಮೃಣ್ಣ ಕಡಮೂರ, ಹೇಮಂತ ವಡ್ಡೆಪಲ್ಲಿ, ಮಂಜುನಾಥ ಮಾನೆ, ಅರುಣ ರಾಂಪೂರ, ರಾಜು ಮಾನೆ. ವಿಕಾಸ್ ಕ್ಷೀರಸಾಗರ, ರಮೇಶ ರಾಂಪೂರ, ಪರಶುರಾಮ ಬಳ್ಳಾರಿ ಆನಂದ ಮಾನೆ, ಸುರೇಶ ಬೂದೂರ, ತುಕಾರಾಂ ಮಾನೆ, ಶ್ರೀನಿವಾಸ ಕೋಟೆಕಲ್, ಸುನೀಲ್ ರಾಯಚೂರು, ಕೃಷ್ಣಾ ಬೂದೂರ. ಬಸವರಾಜ ಗೌಡ, ರಾಮು ವಡೇಪಲ್ಲಿ, ವೆಂಕಟೇಶ ಕೋಟೆಕಲ್ಲ, ಪರಶುರಾಮ ಕೊಲ್ಲೂರು, ಪರಶುರಾಮ ಮಾರ್ಲಬೇಡ್, ಗಣೇಶ ಕಡಮೂರ, ಪ್ರಕಾಶ ಬೂದೂರು, ಸಾಗರ ಹಡಪದ, ಕಾರ್ತಿಕ ಅಗಲವೆ, ಶ್ರೀಧರ ಕಡಬೂರ, ವಿನಯ ರಾಚಮ, ರಾಜು ರಾಮ ಇದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande