ಕಲಬುರಗಿ, 27 ಮೇ (ಹಿ.ಸ.) :
ಆ್ಯಂಕರ್ : ಬೈಕ್ಗೆ ಮರಳಿನ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಕ್ರಾಸ್ ಬಳಿ ನಡೆಸಿದೆ. ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.
ಸಂಕನೂರು ಗ್ರಾಮದ ಹಣಮಂತ (18) ಮೃತ ಯುವಕನಾಗಿದ್ದು, ಇನ್ನೊರ್ವ ಬೈಕ್ ಸವಾರ ಲಕ್ಷ್ಮಣ ಹಲಕರ್ಟಿಗೆ ಗಂಭೀರ ಗಾಯಗಳಾಗಿವೆ.
ಬೈಕ್ ಸವಾರರು ಸಂಕನೂರು ಗ್ರಾಮದಿಂದ ನಾಲವಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಮರಳಿನ ಟಿಪ್ಪರ್ ಡಿಕ್ಕಿಯಾಗಿ ಹಿಂಬದಿ ಸವಾರ ಹಣಮಂತ ಮೃತಪಟ್ಟಿದ್ದಾನೆ.
ಇನ್ನು ಗಾಯಾಳು ಲಕ್ಷ್ಮಣ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Samarth biral