ನವದೆಹಲಿ, 26 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರದ ಕ್ರಮಗಳನ್ನು ಹಿಟ್ಲರ್ ಆಡಳಿತ ಶೈಲಿಗೆ ಹೋಲಿಸಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಂವಿಧಾನದ ವಿಚಾರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸುತ್ತಾ, ಅವರ ನೀತಿಗಳನ್ನು ಅನುಸರಿಸುತ್ತೇವೆ ಎಂಬ ಮಾತುಗಳ ನಡುವೆ, ಕಾಂಗ್ರೆಸ್ ಸರ್ಕಾರ ತಾನು ನಡೆಯುತ್ತಿರುವ ಮಾರ್ಗ ಹಿಟ್ಲರ್ ಆಡಳಿತಕ್ಕಿಂತಲೂ ಕಠಿಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಾಕ್ ಸ್ವಾತಂತ್ರ್ಯ ಹಕ್ಕು ಸಂವಿಧಾನದಲ್ಲಿ ಬೇರೆಯಾಗಿದೆ ಎಂದು ಉಲ್ಲೇಖಿಸಿರುವ ಜೋಶಿ, ಸರ್ಕಾರದ ವೈಫಲ್ಯಗಳನ್ನು ಚರ್ಚಿಸಿದರೆ ಸಚಿವರು ಸಂಕೋಚ ತೋರುತ್ತಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಾರ್ವಜನಿಕ ಚರ್ಚೆಗಳಿಗೆ ಹೆದರುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಇತ್ತೀಚೆಗಷ್ಟೇ ಖಾಸಗಿ ನ್ಯೂಸ್ ಚಾನೆಲ್ ಮುಖ್ಯಸ್ಥರ ಬಂಧನಕ್ಕೆ ಪೊಲೀಸರನ್ನು ಬಳಸಿದ ಪ್ರಕರಣವನ್ನು ಉಲ್ಲೇಖಿಸಿ, ಇದು ಸರ್ಕಾರದ ಭಯದ ಸಂಕೇತ, ತಮ್ಮ ದುರಾಡಳಿತ ಮುಚ್ಚಿಡಲು ಮಾಧ್ಯಮದ ಬಾಯಿಯನ್ನು ಮುಚ್ಚುತ್ತಿರುವುದು ಜನತೆಯ ಆತ್ಮವಿಶ್ವಾಸದ ವಿರುದ್ಧದ ನಡೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳಲ್ಲಿ ಸುಭಿಕ್ಷವಾಗಿದ್ದ ರಾಜ್ಯದ ಆರ್ಥಿಕತೆ ಇಂದು ಮಿತಿಮೀರಿದ ಓಲೈಕೆ ರಾಜಕಾರಣದಿಂದ ಹಾಳಾಗಿದೆ. ಈ ಹತಾಶೆಯ ಕಾರಣದಿಂದಲೇ ಇದೀಗ ಸರ್ಕಾರ ಮಾಧ್ಯಮದ ಮೇಲೂ ಹಸ್ತಕ್ಷೇಪ ಆರಂಭಿಸಿದೆ ಎಂಬುದಾಗಿ ಜೋಶಿ ವಾದಿಸಿದರು. ಕರ್ನಾಟಕ ಈ ಹಿಟ್ಲರ್ ಅಥವಾ ಮೊಘಲ್ ಶೈಲಿಯ ಆಡಳಿತವನ್ನು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa