ಜನ ಔಷಧಿ ಕೇಂದ್ರ ಮುಚ್ಚಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ
ಗದಗ, 26 ಮೇ (ಹಿ.ಸ.) ಆ್ಯಂಕರ್:- ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವರುಗಳು ಸರ್ಕಾರಿ ಆಸ್ಪತ್ರೆ ಹಾಗು ಸುತ್ತಮುತ್ತಲಿನ ವಾತಾವರಣದಲ್ಲಿ ಕೇಂದ್ರ ಸರ್ಕಾರದ ಬಡವರ ಪಾಲಿಗೆ ಮಹತ್ತರ ಯೋಜನೆಯಾದ ಜನ ಔಷದಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಬಹಳಷ್ಟು ಸಾರ್ವಜನಿಕಗೆ ಹಾಗು ಮಧ್ಯಮ
ಜನ ಔಷಧಿ ಕೇಂದ್ರ ಮುಚ್ಚಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ


ಗದಗ, 26 ಮೇ (ಹಿ.ಸ.)

ಆ್ಯಂಕರ್:- ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವರುಗಳು ಸರ್ಕಾರಿ ಆಸ್ಪತ್ರೆ ಹಾಗು ಸುತ್ತಮುತ್ತಲಿನ ವಾತಾವರಣದಲ್ಲಿ ಕೇಂದ್ರ ಸರ್ಕಾರದ ಬಡವರ ಪಾಲಿಗೆ ಮಹತ್ತರ ಯೋಜನೆಯಾದ ಜನ ಔಷದಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಬಹಳಷ್ಟು ಸಾರ್ವಜನಿಕಗೆ ಹಾಗು ಮಧ್ಯಮ ವರ್ಗದ ಜನರಿಗೆ ಅನ್ಯಾಯ ಮಾಡಲು ಹೊರಟಿರುವ ಕಾಂಗ್ರೆಸ್

ಸರ್ಕಾರದ ಆರೋಗ್ಯಮಂತ್ರಿ ದಿನೇಶ ಗುಂಡುರಾವ್ ರವರು ತೆಗೆದುಕೊಂಡಿರುವ ಜನ ಔಷಧಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಖಂಡನೀಯವಾಗಿದೆ.

ಕೇಂದ್ರ ಸರ್ಕಾರವು ದೇಶಾಧ್ಯಂತ ಬಡವರಿಗೆ, ದೀನದಲಿತರಿಗೆ, ಮಧ್ಯಮ ವರ್ಗದವರಿಗೆ ಕಡಿಮೆ ಧರದಲ್ಲಿ ಔಷಧಿ ದೊರೆಯಬೇಕೆಂದು ಬಹುದೊಡ್ಡ ಕನಸಿನೊಂದಿಗೆ ನರೇಂದ್ರ ಮೋದಿಜೀರವರು ಜನ ಔಷಧಿ ಯೋಜನೆಯನ್ನು ದೇಶಾದ್ಯಂತ ಜಾರಿಯಲ್ಲಿ ತಂದಿದ್ದರು. ಸಾರ್ವಜನಿಕರೂ ಕೂಡಾ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಯೋಜನೆಯ ಉದ್ದೇಶ ಹಾಗು ಗುರಿಯನ್ನು ರಾಜ್ಯ ಸರ್ಕಾರವು ಹೊಟ್ಟೆಕಿಚ್ಚಿನಿಂದ ಹಾಗು ಮೋದಿಜಿ ರವರ ಮೇಲೆ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಸರ್ಕಾರಕ್ಕೆ ಜನರು ಚಿಮಾರಿ ಹಾಕುತ್ತಿದ್ದಾರೆ. ಈ ಯೋಜನೆಯಿಂದ ಸಾಕಷ್ಟು ಬಡ ಜನರು ತಮ್ಮ ಖಾಯಿಲೆಗಳಿಗೆ ಕಡಿಮೆ ಧರದಲ್ಲಿ ಔಧಿಗಳನ್ನು ಪಡೆದುಕೊಳ್ಳುತ್ತಿದ್ದರು ಹಾಗು ಜನ ಔಷಧಿ ಕೇಂದ್ರಗಳಲ್ಲಿ ಸಿಗುವ ಔಷಧಿಗಳು ದೀಘ್ರ ಕಾಲದ ರೋಗಗಳಾದ ಬಿಪಿ, ಶುಗರ್, ಹಾರ್ಟ್(ಹೃದಯ ಖಾಯಲೆ), ಟಿಬಿ ಇನ್ನೂ ಹಲವಾರು ಖಾಯಿಲೆಗಳಿಗೆ ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರ ರೋಗಿಗಳಿಗೆ ಒದಗಿಸುತ್ತಿತ್ತು. ಇವತ್ತಿನ ಬೆಲೆ ಏರಿಕೆಯಲ್ಲಿ ಈ ಎಲ್ಲ ಔಷಧಿಗಳು ಜನರಿಗೆ ನಿಲುಕಲು ಸಾಧ್ಯವ? ಅದನ್ನು ಸಾರ್ವಜನಿಕರಿಂದ ಕಿತ್ತುಕೊಂಡಿರುವ ಕರ್ನಾಟಕದ ಕಾಂಗ್ರೇಸ್ ಸರ್ಕಾರ ಬಡಜನರ ಹಕ್ಕನ್ನು ಕಸಿಯುತ್ತಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮತ್ತೆ ಮೊದಲಿನ ಹಾಗೆ ದೊರೆಯುವ ಹಾಗೆ ಮಾಡಬೇಕು ಇಲ್ಲವಾದರೆ ಬರುವಂತ ದಿನಮಾನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸುವರು ಎಂದು ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande