ಬೆಂಗಳೂರು, 25 ಮೇ (ಹಿ.ಸ.) :
ಆ್ಯಂಕರ್ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣದಲ್ಲಿ ಸಿಟಿ ರವಿ ಧ್ವನಿ ಮಾದರಿ ನೀಡದಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಬಿಜೆಪಿಯವರ ಪೌರುಷ ಮೈಕ್ ಮುಂದೆ ಮಾತ್ರ. ನ್ಯಾಯಾಲಯದಿಂದ ತಡೆಯಾಜ್ಞೆ ತರೋದೇಕೆ? ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮುಲು ಅವರ ಕಲಬುರಗಿ ರಿಪಬ್ಲಿಕ್ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ಕಲಬುರ್ಗಿ ರಿಪಬ್ಲಿಕ್ ಹೇಳುವುದು ಹಾಸ್ಯಾಸ್ಪದ. ರಾಮುಲು ಅವರಿಗೆ ಕನಿಷ್ಟ ಜ್ಞಾನವೂ ಇಲ್ಲ. ನನ್ನನ್ನು ಪಪ್ಪು ಎಂದಿದ್ದಾರೆ, ಚರ್ಚೆಗೆ ನಾನು ಸಿದ್ಧ, ಅವರು ಸಿದ್ಧರಾ? ಎಂದು ಸವಾಲೆಸೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa