ರವಿವಾರ ಶ್ರೀಮಹಾರಾಣ ಪ್ರತಾಪ ಜಯಂತಿ, ಪ್ರತಿಭಾ ಪುರಸ್ಕಾರ
ರಾಯಚೂರು, 23 ಮೇ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲಾ ರಾಜಪೂತ ಸಮಾಜದ ವತಿಯಂದ ಮೇ 25ರಂದು ರವಿವಾರ ಶ್ರೀರಾಣಾ ಪ್ರತಾಪಜೀ 485ನೇ ಯ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮನೋಹರಸಿಂಗ ಅವರು ತಿಳಿಸಿದ್ದಾರೆ. ಪ್ರತಿ ವರ್ಷದಂದತೆ ಈ ವರ್ಷವೂ ನಡೆಯುವ
ರವಿವಾರ ಶ್ರೀಮಹಾರಾಣ ಪ್ರತಾಪ ಜಯಂತಿ, ಪ್ರತಿಭಾ ಪುರಸ್ಕಾರ


ರಾಯಚೂರು, 23 ಮೇ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲಾ ರಾಜಪೂತ ಸಮಾಜದ ವತಿಯಂದ ಮೇ 25ರಂದು ರವಿವಾರ ಶ್ರೀರಾಣಾ ಪ್ರತಾಪಜೀ 485ನೇ ಯ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮನೋಹರಸಿಂಗ ಅವರು ತಿಳಿಸಿದ್ದಾರೆ.

ಪ್ರತಿ ವರ್ಷದಂದತೆ ಈ ವರ್ಷವೂ ನಡೆಯುವ ಈ ಜಯಂತಿ ಕಾರ್ಯಕ್ರಮ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜ ಸಂಜೆ ಅಂದು 7ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಕುಮಾರನಾಯಕ, ಶಾಸಕ ಡಾ.ಶಿವರಾಜ ಪಾಟೀಲ ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್, ಪಾಲಿಕೆ ಮೇಮರ ನರಸಮ್ಮ ಮಾಡಿಗಿರಿ, ಪಾಲಿಕೆ ಸದಸ್ಯ ಎನ್.ಶ್ರೀನಿವಾಸ್ ರೆಡ್ಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾಾನ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನಾಾ ನಗರದ ಮಾವಿನಕೆರೆ ಬಳಿ ಇರುವ ಶ್ರೀ ರಾಣಾ ಪ್ರತಾಪಜೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಂಜೇ 4ಗಂಟೆಗೆ ಶೊಭಾ ಯಾತ್ರೆ ಆರಂಭವಾಗಿ ನಗರದ ತೀನ್ ಕಂದೀಲ ಮೂಲಕ ಸಮಾರಂಬದ ನಡೆಯುವನ ಸ್ಥಳ ಗದ್ವಾಲ್ ರಸ್ತೆಗೆ ಇರುವ ರಾಜಪೂತ ಸಮಾಜದ ಆವರಣ ಉದಾಸಿ ಮಠಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಅಧ್ಯೆಕ್ಷತೆ ಜಿಲ್ಲಾಾ ಅಧ್ಯಕ್ಷ ಮನೋಹರ ಸಿಂಹ ವಹಿಸಲಿದ್ದೂ ಸಮಾಜದ ಭಾಂದವರು ಭಾಗವಹಿಸಿ ಯಶಸ್ವಿಗೋಳಿಸಬೇಕು ಎಂದು ಸಂಘದ ಪ್ರಧಾನಾ ಕಾರ್ಯದರ್ಶಿ ಗೌತಮ ಶುಕ್ಲಾ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande