ನವದೆಹಲಿ, 23 ಮೇ (ಹಿ.ಸ.) :
ಆ್ಯಂಕರ್ : ಆಂಧ್ರ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಕುರಿತು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಜೊತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನವದೆಹಲಿಯಲ್ಲಿ ಚರ್ಚೆ ನಡೆಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ನಾಯ್ಡು ಅವರ ಅನುಷ್ಠಾನದ ನೈಪುಣ್ಯದಡಿ ಆಂಧ್ರಪ್ರದೇಶವು ಹಸಿರು ಬೆಳವಣಿಗೆಯಲ್ಲಿ ಉತ್ತಮ ಸಾಧನೆ ನಡೆಸುತ್ತಿದೆ ಎಂದು ಜೋಶಿ ಶ್ಲಾಘಿಸಿದರು.
ಪಿ.ಎಂ.ಕುಸುಮ್ ಮತ್ತು ಪಿ.ಎಂ. ಸೂರ್ಯಘರ್ ಯೋಜನೆಗಳ ಅಡಿಯಲ್ಲಿ ಹೆಚ್ಚುವರಿ ಹಂಚಿಕೆ ಹಾಗೂ ಛಾವಣಿಯ ಮೇಲ್ಭಾಗದ ಸೌರಶಕ್ತಿ ಸ್ಥಾಪನೆಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಚರ್ಚೆ ನಡೆಯಿತು.
ಹಸಿರು ಇಂಧನ ಕಾರಿಡಾರ್ ಹಾಗೂ ಸೌರ ಉದ್ಯಾನವನಗಳ ಅನುಷ್ಠಾನಕ್ಕೂ ಗಮನಹರಿಸಲಾಯಿತು. ಶುದ್ಧ ಇಂಧನ ಸಹಯೋಗವರ್ಧನೆಗಾಗಿ ಕೇಂದ್ರ-ರಾಜ್ಯ ಜತೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರ ನಿರೀಕ್ಷಿಸಲಾಗಿದೆ ಎಂದು ಜೋಶಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ರಾಜ್ಯ ಸಚಿವ ಪೆಮ್ಮಾಸಾನಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa