ಪಂಡಿತ ಪುಟ್ಟರಾಜರು ನಾಡು ಕಂಡ ವಿಸ್ಮಯ : ಸ್ವಾಮೀಜಿ
ಗದಗ, 09 ಮಾರ್ಚ್ (ಹಿ.ಸ.) : ಆ್ಯಂಕರ್ : ಅಂಧರ ಅನಾಥರ ಬಾಳಿನ ನಂದಾದೀಪ, ಆಶ್ರಯದಾತರು ಪಂಡಿತ ಡಾ. ಪುಟ್ಟರಾಜ ಗವಾಯಿಗಳು. ಅಂಧರಾದರೂ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ನಾಡು ಕಂಡ ವಿಸ್ಮಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಲಿಂಗಾಯತ ಪ್ರಗತಿಶೀಲ ಸಂಘದ
ಫೋಟೋ


ಗದಗ, 09 ಮಾರ್ಚ್ (ಹಿ.ಸ.) :

ಆ್ಯಂಕರ್ : ಅಂಧರ ಅನಾಥರ ಬಾಳಿನ ನಂದಾದೀಪ, ಆಶ್ರಯದಾತರು ಪಂಡಿತ ಡಾ. ಪುಟ್ಟರಾಜ ಗವಾಯಿಗಳು. ಅಂಧರಾದರೂ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ನಾಡು ಕಂಡ ವಿಸ್ಮಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2735 ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರು ಶ್ರೇಷ್ಠ ಸಾಧಕರು ಮತ್ತು ಪಂಡಿತರು ಹೌದು. ಅನೇಕ ಪುರಾಣ, ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಅವರು ಕನ್ನಡ, ಸಂಸ್ಕೃತಿ, ಹಿಂದಿ ಬಲ್ಲವರಾಗಿದ್ದರು. ಅಂತೆಯೇ ಅವರನ್ನು ಕವಿ ಎಂದು ಕರೆಯುತ್ತಾರೆ. ಚಂಪೂ ಕೃತಿಗಳನ್ನು ರಚಿಸಿದ್ದಾರೆ. ಪುಟ್ಟರಾಜರು ಉಭಯಗಾನ ವಿಶಾರದರು. ಅವರು ಕಂಠ, ಸಂಗೀತ ಹಾಗೂ ವಾದ್ಯ ಸಂಗೀತದಲ್ಲಿ ಪರಿಣತಿಯನ್ನು ಪಡೆದಿದ್ದರಿಂದ ಅವರನ್ನು ಉಭಯಗಾನ ವಿಶಾರದರು ಎಂದರು.

ಸಾವಿರಾರು ಜನ ಅಂಧ ಅನಾಥರ ಬಾಳು ಬೆಳಗಿದರು. ನಾಟಕಗಳ ಮೂಲಕ ಜನರಲ್ಲಿ ಧಾರ್ಮಿಕ ಆಧ್ಯಾತ್ಮಿಕ, ಜಾಗೃತಿ ಮೂಡಿಸಿದರು. ಲೋಕದಂತೆ ಬಾರದು ಲೋಕದಂತೆ ಇರರು, ಪುಟ್ಟರಾಜರಿಗೆ ಪುಟ್ಟರಾಜರೇ ಹೋಲಿಕೆ. ಅವರ ಈ ವೈಶಿಷ್ಟ್ಯಪೂರ್ಣ ಸಾಧನೆಗೆ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದು ಶ್ರೀಗಳು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಪಿ ಪಿ ಜಿ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿ.ಎಂ. ಗುರುಮಠ ಮಾತನಾಡಿ, ಪುಟ್ಟರಾಜರು ಎಪ್ಪತ್ತೈದು ಗ್ರಂಥಗಳನ್ನು ಬರೆದಿದ್ದಾರೆ. ಅಂಧತೆ ಇದ್ದರೂ ವಿಶೇಷ ಕಣ್ಣುಗಳಿಂದ ಸಮಾಜವನ್ನು ನೋಡಿ, ಜನರಲ್ಲಿ ಧಾರ್ಮಿಕ ಆಧ್ಯಾತ್ಮಿಕ ಜಾಗೃತಿ ಮೂಡಿಸಿದರು. ಕನ್ನಡ ಸಂಸ್ಕೃತ, ಹಿಂದಿಯಲ್ಲಿ ಅನೇಕ ಗ್ರಂಥಗಳನ್ನು ಬರೆದರು. ಅವರು ಪೀಠಾಧಿಪತಿಯಾದ ನಂತರ ವಿರೇಶ್ವರ ಪುಣ್ಯಾಶ್ರಮವನ್ನು ತುಂಬಾ ಎತ್ತರಕ್ಕೆ ಬೆಳೆಸಿದರು. ಪಂಚಾಕ್ಷರಿ ನಾಟ್ಯ ಸಂಘವನ್ನು ಸ್ಥಾಪಿಸಿದರು. ಅವರಲ್ಲಿ ಸಂಗೀತ ಅಭ್ಯಾಸ ಮಾಡಿದವರು ಅನೇಕರು, ದೊಡ್ಡ ದೊಡ್ಡ ಸಂಗೀತ ಸಾಧನೆ ಮಾಡಿದ್ದಾರೆ. ಅಂಧರಿಗೆ ಅನಾಥರಿಗೆ ಆಶ್ರಯ ಕೊಡದೆ ಹೋಗಿದ್ದರೆ ಭಿಕ್ಷೆ ಬೇಡಿ ಬದುಕು ಕಟ್ಟಿಕೊಳ್ಳಬೇಕಾಗುತ್ತಿತ್ತು. ಆದರೆ ಪುಟ್ಟರಾಜರು ಅವರಿಗೆ ಸಂಗೀತ ವಿದ್ಯೆ ಕಲಿಸಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಟ್ಟರು ಎಂದರು.

ಪುಟ್ಟರಾಜ ಕವಿ ಗವಾಯಿಗಳ ಜಯಂತಿ ಪ್ರಯುಕ್ತ ಗದುಗಿನ ಸಿದ್ದಲಿಂಗನಗರದ ಸ.ಪ್ರೌ.ಶಾಲೆಯ ಅಂಧ ಸಂಗೀತ ಶಿಕ್ಷಕರಾದ ನಾಗಪ್ಪ ಆರ್. ಶಿರೋಳ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಿ.ಎಸ್. ಸಂಶಿಮಠ, ರಾಜು ಕುರಡಗಿ, ರಾಜಣ್ಣ ಗುಡಿಮನಿ ಉಪಸ್ಥಿತರಿದ್ದರು. ಸಂಗೀತ ಸೇವೆ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅಪೇಕ್ಷಾ ಎಚ್. ಹೊನಗಣ್ಣನವರ ಹಾಗೂ ವಚನ ಚಿಂತನವನ್ನು ಸೃಷ್ಟಿ .ವಿ. ಪೂಜಾರ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande