ಮುಷ್ಕರ ನಿರತರ ಸಮಸ್ಯೆ ಪರಿಹಾರಕ್ಕೆ `ವಿಶೇಷ ಸಲಹಾ ಸಮಿತಿ' ರಚನೆ
ಬೆಂಗಳೂರು, 05 ಮಾರ್ಚ್ (ಹಿ.ಸ.) : ಆ್ಯಂಕರ್ : ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ರೆವೆನ್ಯೂ ಇನ್ಸ್‍ಪೆಕ್ಟರ್‍ಗಳು ಎರಡನೇ ಅವಧಿಗೆ ಮುಷ್ಕರ ನಡೆಸಿರುವುದ್ದು, ಪ್ರತಿಭಟನಾ ನಿರತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತುರ್ತಾಗಿ ಗಮನ ನೀಡಬೇಕು ಎಂದು ಬಳ್ಳಾರಿ - ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥ
'Special Advisory Committee' formed to resolve the problems of the strikers


ಬೆಂಗಳೂರು, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ರೆವೆನ್ಯೂ ಇನ್ಸ್‍ಪೆಕ್ಟರ್‍ಗಳು ಎರಡನೇ ಅವಧಿಗೆ ಮುಷ್ಕರ ನಡೆಸಿರುವುದ್ದು, ಪ್ರತಿಭಟನಾ ನಿರತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತುರ್ತಾಗಿ ಗಮನ ನೀಡಬೇಕು ಎಂದು ಬಳ್ಳಾರಿ - ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ರೆವೆನ್ಯೂ ಇನ್ಸ್‍ಪೆಕ್ಟರ್‍ಗಳು ಎರಡನೇ ಅವಧಿಗೆ ಮುಷ್ಕರ ಸರ್ಕಾರದ ಗಮನ ಸೆಳೆದಿದೆ. ಮುಷ್ಕರ ನಡೆಸಿದ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಲು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ `ವಿಶೇಷ ಸಲಹಾ ಸಮಿತಿ'ಯನ್ನು ರಚಿಸಲಾಗಿದೆ. ವಿಶೇಷ ಸಲಹಾ ಸಮಿತಿಯು ಮುಷ್ಕರ ನಿರತರ ಬೇಡಿಕೆಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ಉತ್ತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande